Posts Slider

Karnataka Voice

Latest Kannada News

ಹುಬ್ಬಳ್ಳಿಯ ದಲಿತ ನಾಯಕ ಪೀತಾಂಬರಪ್ಪ ಬಿಳಾರ ಆಕಸ್ಮಿಕ ಸಾವು: ಮರೆಯಾದ ಹೋರಾಟಗಾರ

1 min read
Spread the love

ಹುಬ್ಬಳ್ಳಿ: ದಶಕಗಳಿಂದಲೂ ಬಡವರ, ದಲಿತರ,ಅಲ್ಪಸಂಖ್ಯಾತರ ಪರವಾಗಿ ಹೋರಾಟ ಮಾಡುತ್ತಲೇ ಬಂದಿದ್ದ ಪೀತಾಂಬರಪ್ಪ ಬಿಳಾರ, ಇಂದು ಆಕಸ್ಮಿಕವಾಗಿ ನಿಧನ ಹೊಂದಿದ್ದಾರೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯರು. ಪಿತಾಂಬರಪ್ಪ ಬಿಳಾರ ಆಕಸ್ಮಿಕ ನಿಧನದಿಂದ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಪೀತಾಂಬರಪ್ಪ ಬಿಳಾರ, ದಲಿತರಿಗೆ ಮತ್ತು  ವಿವಿಧ ಸಮಾಜಕ್ಕೆ  ಅನ್ಯಾಯವಾದಾಗ ದೌರ್ಜನ್ಯ ಒಳಪಟ್ಟಾಗ ವಿವಿಧ  ಹೋರಾಟ ಪ್ರತಿಭಟನೆ ಹಾಗೂ  ಸರ್ಕಾರಕ್ಕೆ ಮನವರಿಕೆ  ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು.

ದಲಿತರ ಅಭಿವೃದ್ಧಿಗಾಗಿ ಐದು ದಶಕಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದರು. ಇವರ ನಿಧನದಿಂದ ದಲಿತ ಸಮುದಾಯಕ್ಕೆ ಮತ್ತು ವಿವಿಧ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಕುಟುಂಬಕ್ಕೆ ಒಟ್ಟು ಕುಟುಂಬದ  ಅವರಿಗೆ  ಧೈರ್ಯ ಸ್ಥೈರ್ಯ ನೀಡಲಿ ಎಂದು ಬಸವ ಜನಶಕ್ತಿಯ ಅಧ್ಯಕ್ಷ ಬಸವರಾಜ ತೇರದಾಳ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಅಮೃತ್ ಇಜಾರಿ ಹಾಗೂ ರಮೇಶ್ ಕೋಲ್ಗೌಡ,  ಬಸ್ಸಪ್ಪ ಯಮನಾಳ, ವೀರಣ್ಣ ನೀರಲಗಿ, ಪ್ರಕಾಶ ಕಾಳೆ, ತೇಜ ಉಳ್ಳಿಕಾಶಿ ಮುಂತಾದವರು ದುಃಖ ಸಂತಾಪ ವ್ಯಕ್ತಪಡಿಸಿದ್ದಾರೆ.


Spread the love

Leave a Reply

Your email address will not be published. Required fields are marked *