Posts Slider

Karnataka Voice

Latest Kannada News

ಬಸವರಾಜ ಕೊರವರ ತೀವ್ರ ಅಸ್ವಸ್ಥ: ಆಸ್ಪತ್ರೆಯಲ್ಲಿ ಜಮಾಯಿಸಿದ ನೂರಾರು ಜನ….

1 min read
Spread the love

ಧಾರವಾಡ: ಬೀದಿಗೆ ಬಿದ್ದಿರುವ ನೌಕರರ ಪರವಾಗಿ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ತೀವ್ರ ಅಸ್ವಸ್ಥಗೊಂಡಿದ್ದು, ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜಲಮಂಡಳಿಯಲ್ಲಿದ್ದ ನೌಕರರನ್ನ ಎಲ್ ಆ್ಯಂಡ್ ಟಿ ಕಂಪನಿಯೂ ಬೀದಿಗೆ ಬಿಟ್ಟಿದ್ದಲ್ಲದೇ ಅವಳಿನಗರದಲ್ಲಿ ನೀರಿನ ಸರಬರಾಜು ವ್ಯವಸ್ಥೆಯು ಹದಗೆಟ್ಟಿದೆ. ಇದನ್ನ ವಿರೋಧಿಸಿ ಸಾಮಾಜಿಕ ಕಾರ್ಯಕರ್ತ ಹಾಗೂ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನಿನ್ನೆಯಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

ಇಂದು ಸಂಜೆ ನೂರಾರೂ ಹೋರಾಟಗಾರರ ಸಮೇತ ಬಸವರಾಜ ಅವರನ್ನೂ ಬಂಧಿಸಿ, ಬಿಡುಗಡೆ ಮಾಡುವ ಮುನ್ನವೇ ತೀವ್ರವಾಗಿ ಅಸ್ವಸ್ಥಗೊಂಡಿದ್ದರಿಂದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *