ಧಾರವಾಡ-71 ರ ಕ್ಷೇತ್ರದಲ್ಲಿ “ಸರಕಾರಿ ಶಾಲೆ ಮಕ್ಕಳಿಗೆ ಜೀವಾಳ” ಬಸವರಾಜ ಕೊರವರ…

ಧಾರವಾಡ: ಕೇವಲ ಮಾತುಗಳನ್ನ ಆಡಿ ಮರೆಯುವ ಜಾಯಮಾನ ಹೊಂದದ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಅವರು, ಯಾವುದೇ ಫಲಾಪೇಕ್ಷೆಯಿಲ್ಲದೇ ಸರಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲು ಮುಂದಾಗಿ, ಧಾರವಾಡ-71 ಕ್ಷೇತ್ರದಲ್ಲಿ ಹೊಸ ನಾಂದಿ ಹಾಡಿದ್ದಾರೆ.

ಹೌದು.. ಕೆಲವರು ಮತದಾರರನ್ನ ಟಾರ್ಗೆಟ್ ಮಾಡಿ ಕೆಲಸ ಮಾಡುವುದನ್ನ ಬಹುತೇಕರು ನೋಡಿರುತ್ತೇವೆ. ಇನ್ನೂ ಕೆಲವರು ಚುನಾವಣೆ ಸಮೀಪಿಸುತ್ತಿರುವ ಹಾಗೇ ಆಯಾ ಕ್ಷೇತ್ರಕ್ಕೆ ಸಂಬಂಧವಿರದವರು ಕೂಡಾ, ಜನರ ಆರೋಗ್ಯ ತಪಾಸಣೆ ನಡೆಸಲು ಮುಂದಾಗುತ್ತಾರೆ. ಅವರಿಗೆ ಮುಂದಿನ ಚುನಾವಣೆಯೇ ಟಾರ್ಗೆಟ್ ಆಗಿರತ್ತೆ ಹೊರತಾಗಿ ಜನಪರ ಕಾಳಜಿಯಲ್ಲ.

ಆದರೆ, ಇಂಥಹದಕ್ಕೆ ಯಾವತ್ತೂ ಮುಂದಾಗದ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ, ಬಡವರೇ ಹೆಚ್ಚಾಗಿ ಕಲಿಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದಾರೆ. ಬಡವರ ಮಕ್ಕಳಿಗೆ ಶಿಕ್ಷಣದಲ್ಲಿ ಭದ್ರ ಬುನಾದಿ ಸಿಗಬೇಕೆಂಬ ಕಲ್ಪನೆ ಅವರದ್ದು.

ಜನಜಾಗೃತಿ ಸಂಘ ಹಾಗೂ ಬಸವರಾಜ ಕೊರವರ ಗೆಳೆಯರ ಬಳಗದ ವತಿಯಿಂದ ಧಾರವಾಡ- 71 ಕ್ಷೇತ್ರದಲ್ಲಿ ಒಂದು ಲಕ್ಷ ನೋಟ್ ಬುಕ್ ವಿತರಣೆ ನಡೆಸುವ ಯೋಜನೆಯನ್ನ ಹಾಕಿಕೊಂಡಿದ್ದಾರೆ. ಇದಕ್ಕೆ ಪ್ರತಿ ಗ್ರಾಮದಲ್ಲಿಯೂ ಉತ್ತಮ ಸ್ಪಂಧನೆ ಸಿಗುತ್ತಿದೆ.

ಮನುಷ್ಯನ ಚಟುವಟಿಕೆಗಳು ಆತನ ಮನಸ್ಥಿತಿಯನ್ನ ತೋರಿಸುತ್ತದೆ. ತಾನೂ ಮಾಡುವುದು ಸಮಾಜಕ್ಕೆ ಒಳ್ಳೆಯದು ಆಗಬೇಕೆಂಬ ಕಲ್ಪನೆಯಿರಬೇಕೆ ಹೊರತು, ಅದರಿಂದ ಫಲಾಪೇಕ್ಷೆ ಇರಬಾರದು ಎಂಬುದನ್ನ ಚಾಚೂ ತಪ್ಪದೇ ಪಾಲಿಸುತ್ತಿರುವುದು ಬಸವರಾಜ ಕೊರವರ. ಇವರೆಲ್ಲ ಕನಸಿಗೂ ಹೆಗಲು ಕೊಟ್ಟಿದ್ದು ಬಸವರಾಜ ಕೊರವರ ಪತ್ನಿ ಸುಮಾ ಅವರು.
ಅಧಿಕಾರ ಲಾಲಸೆಯೇ ಇಲ್ಲದವನಿಗೆ ಅಂಗಳದಲ್ಲಿಯೂ ಅನ್ನ ರುಚಿಸುತ್ತದೆ ಎಂಬುದನ್ನು ಬಸವರಾಜ ಕೊರವರ ಅವರನ್ನ ನೋಡಿದ್ರೇ ಸತ್ಯ ಅನಿಸತ್ತೆ. ಶಾಲೆಯ ಮಕ್ಕಳೊಂದಿಗೆ ಮಕ್ಕಳಾಗಿ ಕೂತು ಅವರೊಂದಿಗೆ ಊಟ ಮಾಡಿ ಬರುವ ಮನಸ್ಸು, ಪ್ರಜ್ಞಾವಂತರಿಗೆ ಇರಲು ಸಾಧ್ಯ ಎಂಬುದು ಪ್ರತಿಯೊಬ್ಬರ ಮನದಲ್ಲೂ ಮೂಡುವಂತಿದೆ.
ಅಕ್ಷರವನ್ನ ಪೋಣಿಸುವ ಮಹತ್ ಕಾರ್ಯವನ್ನ ಕ್ಷೇತ್ರದಲ್ಲಿ ಯಾವುದೇ ಪ್ರಚಾರ ಪಡೆಯದೇ ನಡೆಸುತ್ತಿರುವ ವಿರಳೀಗರಾಗಿರುವ ಬಸವರಾಜ ಕೊರವರ ಈ ಕಾರ್ಯ ಜ್ಞಾನವಂತರ ಮನಸ್ಸನ್ನ ಗೆದ್ದಿರುವುದಂತೂ ಸತ್ಯ. ಮುಂಬರುವ ದಿನದಲ್ಲಿ ಕೆಲವು ಪುಂಡಪೋಕರಿಗಳು “ನಾನು ನೋಟ್ ಬುಕ್ ಕೊಡ್ತೇನ್ರಿ” ಎಂದು ಪ್ರಚಾರ ಪಡೆಯಲು ಮುಂದು ಬಂದರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೇ, ಬಸವರಾಜ ಕೊರವರ ಅವರ ಈ ಸಾಮಾಜಿಕ ಸೇವೆ ಪ್ರತಿ ಮನೆ ಮನಗಳನ್ನ ತಲುಪಿದೆ.