Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯ ಎಲ್ಲ ಬ್ಯಾಂಕ್ ಗಳ ವ್ಯವಹಾರ ಸಮಯ ಬದಲು…!

1 min read
Spread the love

ಹುಬ್ಬಳ್ಳಿ: ನಾಳೆ ಏಪ್ರೀಲ್ 22 ರಿಂದ ಮೇ 31 ರವರೆಗೆ ಜಿಲ್ಲೆಯಾದ್ಯಂತ ಬ್ಯಾಂಕುಗಳು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ  ಗ್ರಾಹಕರಿಗೆ ಮೂಲಭೂತ ಬ್ಯಾಂಕಿಂಗ್ ಸೇವೆ ನೀಡಲಿವೆ. ನಂತರ ಸಂಜೆ 4 ಗಂಟೆಯವರೆಗೆ ಆಂತರಿಕ ಕೆಲಸಕ್ಕಾಗಿ ಬ್ಯಾಂಕ್ ತೆರೆದಿರುತ್ತದೆ.

ಜಿಲ್ಲೆಯಾದ್ಯಂತ ಈ ಸಮಯ ನಾಳೆಯಿಂದಲೇ ಜಾರಿಯಾಗಲಿದೆ. ಮೇ.31 ರವರೆಗೆ ಜಾರಿಯಲ್ಲಿರುತ್ತದೆ ಎಂದು ಧಾರವಾಡ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಅಣ್ಣಯ್ಯ  ತಿಳಿಸಿದ್ದಾರೆ.

ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಇಂತಹ ನಿರ್ಧಾರವನ್ನ ತೆಗೆದುಕೊಳ್ಳಲಾಗಿದ್ದು, ಗ್ರಾಹಕರು ಕೂಡಾ ಈ ಸಮಯವನ್ನ ಪಾಲಿಸಬೇಕಿದೆ.


Spread the love

Leave a Reply

Your email address will not be published. Required fields are marked *