Posts Slider

Karnataka Voice

Latest Kannada News

ಬಂಡಿವಾಡ, ಕರಡಿಗುಡ್ಡ, ಶಿರಗುಪ್ಪಿಯಲ್ಲಿ “ಹಿತ್ತಲು-ಹೊಲ”ದಲ್ಲಿ ಬೆಳೆದಿದ್ದ ಹಸಿ ಗಾಂಜಾ ವಶ…!!!

1 min read
Spread the love

ಧಾರವಾಡ: ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳೀಯ ಪೊಲೀಸರ ಜೊತೆಗೂಡಿ ಹುಬ್ಬಳ್ಳಿ ತಾಲೂಕಿನ ಬಂಡಿವಾಡ, ಶಿರಗುಪ್ಪಿ ಮತ್ತು ಧಾರವಾಡ ತಾಲೂಕಿನ ಕರಡಿಗುಡ್ಡದಲ್ಲಿ ದಾಳಿ ಮಾಡಿ, ಹಸಿ ಗಾಂಜಾ ಗಿಡಗಳನ್ನ ವಶಕ್ಕೆ ಪಡೆಯಲಾಗಿದೆ.

ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದ ಜಮೀನಿನಲ್ಲಿ ಹೇಮರೆಡ್ಡಿ ಯಲ್ಲಪ್ಪ ರಡ್ಡೇರ್ ಬೆಳೆದಿದ್ದ 7ಕೆಜಿ 40ಗ್ರಾಂ ತೂಕದ 12 ಗಾಂಜಾ ಗಿಡಗಳನ್ನ ವಶಕ್ಕೆ ಪಡೆಯಲಾಗಿದೆ.

ಪೂರ್ಣ ವೀಡಿಯೋ ಇಲ್ಲಿದೆ ನೋಡಿ…

ಶಿರಗುಪ್ಪಿಯ ಶಿವಯ್ಯ ಅಂದಾನಯ್ಯ ಮಂಟೂರ ತನ್ನ ಜಮೀನಿನಲ್ಲಿ ಬೆಳೆದಿದ್ದ 6ಕೆಜಿ 785 ಗ್ರಾಂ ತೂಕದ 28 ಹಸಿ ಗಾಂಜಾ ಗಿಡಗಳನ್ನ ವಶಕ್ಕೆ ಪಡೆಯಲಾಗಿದೆ.

ಕರಡಿಗುಡ್ಡದ ಮನೆಯೊಂದರ ಹಿತ್ತಲಿನಲ್ಲಿ ಬೆಳೆದ ಒಂದು ಗಿಡವನ್ನ ವಶಕ್ಕೆ ಪಡೆಯಲಾಗಿದ್ದು, 7ಕೆಜಿ 455ಗ್ರಾಂ ತೂಕವಿದೆ.

ಹುಬ್ಬಳ್ಳಿ ತಾಲೂಕಿನ ದಾಳಿಯಲ್ಲಿ ಇನ್ಸ್‌ಪೆಕ್ಟರ್ ಮುರುಗೇಶ ಚೆನ್ನಣ್ಣನವರ, ಪಿಎಸ್ಐ ಸಚಿನ ಅಲಮೇಲಕರ ಹಾಗೂ ಗ್ರಾಮೀಣ ಠಾಣೆಯ ಸಿಬ್ಬಂದಿಗಳು ಸಾಥ್ ನೀಡಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ:ಗೋಪಾಲ ಬ್ಯಾಕೋಡ,  ನಾರಾಯಣ ಭರಮನಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಾನಂದ ಕಟಗಿ, ಡಿ.ಎಸ್.ಪಿ, ಸಿ.ಇ.ಎನ್. ಪೊಲೀಸ ಠಾಣೆ ಧಾರವಾಡ ಇವರ ಮಾರ್ಗದರ್ಶನದಲ್ಲಿ ಧಾರವಾಡ ಸಿ.ಇ.ಎನ್. ಪೊಲೀಸ್ ಠಾಣೆಯ ತನಿಖಾಧಿಕಾರಿ ಮುರುಗೇಶ ಟಿ. ಎಸ್. ಪೊಲೀಸ್ ಇನ್ಸಪೆಕ್ಟರ್, ಲಕ್ಷ್ಮೀ ದೇಗಿನಾಳ, ಪಿ.ಎಸ್.ಐ. ಸಿ.ಇ.ಎನ್. ಪೊಲೀಸ ಠಾಣೆಯ ಸಿಬ್ಬಂದಿಗಳಾದ ಎ.ಎಸ್.ಐ. ಯು.ಡಿ. ದೂದಾಳಕರ, ಎಂ. ಬಿ. ಕಂಬೋಗಿ, ಬಸವರಾಜ ಶಿರಕೋಳ, ಡಿ.ಎಂ. ಬಳಿಗೇರ, ಪಿ.ಸಿ ಬಾಗಲಕೋಟಿ, ಎಸ್. ಐ ಜವಳಿ, ಎನ್. ಬಿ. ಕರಜಗಿ, ಬಿ.ಆರ್. ಬನಹಟ್ಟಿ, ವೈ.ಎಚ್. ಪಾಟೀಲ್ ಅವರು ಭಾಗವಹಿಸಿದ್ದರು.

ಪ್ರಕರಣ ಪತ್ತೆ ಮಾಡಿದ ಅಧಿಕಾರಿ, ಸಿಬ್ಬಂದಿಗಳಿಗೆ, ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed