Posts Slider

Karnataka Voice

Latest Kannada News

“ಭಾಸೀ ಬಕ್ರೀದ್”ಗೆ ತೆರಳಿದಾಗ ಭೀಕರ ಅಪಘಾತ- 7 ಸಾವು, 4 ಸ್ಥಿತಿ ಗಂಭೀರ…

1 min read
Spread the love

ಆಟೋಗಳಿಗೆ ಲಾರಿ ಡಿಕ್ಕಿ. 7 ಜನರು ಸಾವು. ನಾಲ್ವರು ಸ್ಥಿತಿ ಗಂಬೀರ…!
ಬಕ್ರೀದ ಮುಗಿಸಿ ಪಿಕನಿಕ್ ತೆರಳಿದವರು ದಾರಿ ಮದ್ಯೆ ಹೆಣವಾದ್ರು..!

ವಿಜಯನಗರ: ಅವರೆಲ್ಲಾ ಬಕ್ರೀದ್ ಹಬ್ಬದ ಸಂಭ್ರಮದಲ್ಲಿದ್ರು. ನಿನ್ನೆ ಸಂಭ್ರಮದಿಂದ ಹಬ್ಬ ಆಚರಿಸಿದ್ದ ಅವರು ಇಂದು ಕುಟುಂಬದವರೆಲ್ಲಾ ಸೇರಿ ಪಿಕನಿಕ್ ತೆರಳಿದ್ರು. ಆದ್ರೆ ವಿಧಿಯಾಟ ಅವರು ಪಿಕನಿಕ್ ಸ್ಥಳ ತಲುಪಲೇ ಇಲ್ಲ. ಯಮರಾಯನಂತೆ ಬಂದ ಬೃಹತ್ತಾದ ಲಾರಿ 2 ಆಟೋಗಳಿಗೆ ಡಿಕ್ಕಿಯಾದ ಪರಿಣಾಮ 7 ಜನರು ಸ್ಥಳದಲ್ಲೆ ಸಾವನ್ನಪ್ಪಿದ ಭೀಕರ ಘಟನೆ ನಡೆದಿದೆ ನೋಡಿ..

ನುಜ್ಜು ಗುಜ್ಜಾಗಿರುವ ಆಟೋಗಳು.. ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು. ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಗಾಯಾಳುಗಳು. ಯೆಸ್. ಇದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿಯ ರೈಲ್ವೆ ಬ್ರೀಡ್ಜ್ ಬಳಿ ನಡೆದ ಭೀಕರ ರಸ್ತೆ ಅಪಘಾತದ ದೃಶ್ಯಗಳು..

ಆಟೋಗಳಿಗೆ ಲಾರಿ ಡಿಕ್ಕಿ. 7 ಜನರು ಸಾವು. ನಾಲ್ವರು ಸ್ಥಿತಿ ಗಂಬೀರ…!
ಬಕ್ರೀದ ಮುಗಿಸಿ ಪಿಕನಿಕ್ ತೆರಳಿದವರು ದಾರಿ ಮದ್ಯೆ ಹೆಣವಾದ್ರು..!

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಇಂದು ಪಿಕನಿಕ್ ಗೆ ತೆರಳುತ್ತಿದ್ದರು. ನಿನ್ನೆ ಬಕ್ರೀದ ಹಬ್ಬದ ಸಂಭ್ರಮದಲ್ಲಿದ್ದ ಇವರೆಲ್ಲಾ ಇಂದು ಬಳ್ಳಾರಿಯ ಹೊಸಪೇಟೆಯ ಟಿಬಿ ಡ್ಯಾಂಗೆ ತೆರಳುತ್ತಿದ್ದರು.
ಬಳ್ಳಾರಿಯ ಕೌಲಬಜಾರ ಪ್ರದೇಶದ 25 ನೇ ವಾರ್ಡ 19 ಜನರು 2 ಆ್ಯಪೆ ಆಟೋಗಳಲ್ಲಿ ಹೊಸಪೇಟೆಗೆ ತೆರಳುತ್ತಿದ್ದ ವೇಳೆ ಯಮಸ್ವರೂಪಿಯಾಗಿ ಬಂದ ಬೃಹತ್ತಾದ ಲಾರಿ ಆಟೋಗಳಿಗೆ ಡಿಕ್ಕಿ ಹೊಡೆದಿದೆ. ಹೊಸಪೇಟೆಯ ವಡ್ಡರಹಳ್ಳಿ ಬಳಿಯ ರೈಲ್ವೆ ಬ್ರಿಡ್ಜ್ ಮೇಲೆ ನಡೆದ ಅಪಘಾತದಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ 7 ಜನರು ಸಾವನಪ್ಪಿದ್ರೆ. 12 ಜನರು ಗಾಯಗೊಂಡಿದ್ದಾರೆ. ಮೃತರೆಲ್ಲಾ ಆಟೋದಲ್ಲಿದ್ದ ಪ್ರಯಾಣಿಕರಾಗಿದ್ದು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರನ್ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಆಟೋಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮಕ್ಕೆ ಬ್ರೀಡ್ಜ್ ಮೇಲಿದ್ದ ಎಲ್ಲರೂ ಕಂದಕಕ್ಕೆ ಕುಸಿದು ಬಿದ್ದಿದ್ದಾರೆ. ಘಟನೆಯನ್ನ ನೋಡಿದ ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಕೆಲವರನ್ನ ರಕ್ಷಣೆ ಮಾಡಿದ್ದಾರೆ. ಘಟನೆಯಲ್ಲಿ ಐವರು ಮಹಿಳೆಯರು. ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ. ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ವಿಜಯನಗರ ಎಸ್ ಪಿ ಶ್ರೀಹರಿಬಾಬು. ಐಜಿಪಿ ಲೋಕೇಶ. ಹೊಸಪೇಟೆ ಶಾಸಕ ಎಚ್ ಆರ್ ಗವಿಯಪ್ಪ ಭೇಟಿ ನೀಡಿ ಗಾಯಾಳುಗಳ ಪರಿಸ್ಥಿತಿ ಅವಲೋಕಿಸಿದ್ರು. ಇನ್ನೂ ಘಟನೆಗೆ ಸಂಭಧಿಸಿದಂತೆ ಸಿಎಂ ಸಿದ್ದರಾಮಯ್ಯನವರ ನಿರ್ದೇಶನದ ಮೇರೆಗೆ ಬಳ್ಳಾರಿ ಉಸ್ತುವಾರಿ ಸಚಿವ ಬಿ ನಾಗೇಂದ್ರ ಮೃತರ ಕುಟುಂಬಗಳಿಗೆ 2 ಲಕ್ಷ ಪರಿಹಾರ. ಗಾಯಾಳುಗಳಿಗೆ 50 ಸಾವಿರ ರೂಪಾಯಿ ಚಿಕಿತ್ಸಾ ವೆಚ್ಚ ಘೋಷಣೆ ಮಾಡಿದ್ದಾರೆ.

ನಿನ್ನೆ ಬಕ್ರೀದ ಹಬ್ಬದ ಸಂಭ್ರಮದಲ್ಲಿದ್ದವರು ಇಂದು ಕುಟುಂಬದ ಜೊತೆ ಪಿಕನಿಕ್ ತೆರಳುತ್ತಿದ್ದ ವೇಳೆಯೇ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 7 ಜನರು ಸಾವನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಸಂಭಧಿಕರ ಆಕ್ರಂದನ ಮುಗಿಲು ಮುಟ್ಟಿದ್ರೆ ಗಾಯಾಳುಗಳು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಅಲ್ವೇ ವಿಧಿಯಾಟ ಅನ್ನೋದು..


Spread the love

Leave a Reply

Your email address will not be published. Required fields are marked *