ಕೆಲವೇ ಗಂಟೆಗಳಲ್ಲಿ ‘ಬೇಲ್’: ಅಗರವಾಲ್, ಕುಲಕರ್ಣಿ ಹೊರಕ್ಕೆ…

ಧಾರವಾಡ: ನಗರದ ಟೈವಾಕ್ ಬಳಿಯ ಹತ್ತಿಕೊಳ್ಳ ಪ್ರದೇಶದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಮತ್ತು ಮಾರಕಾಸ್ತ್ರಗಳ ಜೊತೆಗೆ ಬಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧನವಾಗಿದ್ದ ಇಬ್ಬರು ಜಾಮೀನು ಮೇಲೆ ಬಿಡುಗಡೆ ಆಗಿದ್ದಾರೆ.
ಆಸ್ತಿಯ ವಿಚಾರವಾಗಿ ಬಾಂಬೆ ಮೂಲದ ಸುಶಾಂತ ಅಗರವಾಲ್ ಹಾಗೂ ಪವನ ಕುಲಕರ್ಣಿ ನಡುವೆ ಗಲಾಟೆಯಾಗುವ ಸಾಧ್ಯತೆಯಿದ್ದಾಗ ಬೆದರಿದ್ದ ಅಗರವಾಲ್ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ಪ್ರಕರಣದಲ್ಲಿ ದೂರು-ಪ್ರತಿ ದೂರು ದಾಖಲಾಗಿತ್ತು.
ವಿದ್ಯಾಗಿರಿ ಠಾಣೆಯ ಪೊಲೀಸರು ಇಬ್ಬರನ್ನೂ ಬಂಧಿಸಿ, ಕಾನೂನು ಕ್ರಮ ಜರುಗಿಸಿದ್ದರು. ಇಂದು ಇಬ್ಬರಿಗೂ ಜಾಮೀನು ದೊರೆತಿದ್ದು, ಇಬ್ಬರನ್ನೂ ಡಿಸಿಪಿ ಎದುರಿಗೆ ಹಾಜರು ಪಡಿಸಿ, ಕಳಿಸಲಾಗಿದೆಯಂತೆ.