Posts Slider

Karnataka Voice

Latest Kannada News

ಬಾಡದ ರಜಾಕ ಕವಲಗೇರಿಯನ್ನ ಕೊಂದಿದ್ದು “ನಾಲ್ಕು ದಿಕ್ಕಿನ ಕವಲಗೇರಿ”ಗಳು….

1 min read
Spread the love

ಧಾರವಾಡ: ಬೈಕಿನಲ್ಲಿ ಹೋಗುತ್ತಿದ್ದ ಕೆಇಬಿ ಬಿಲ್ ಕಲೆಕ್ಟರ್‌ನನ್ನ ಹೊಂಚು ಹಾಕಿ ಕೊಲೆ ಮಾಡಿದ ಆರೋಪದಲ್ಲಿ ನಾಲ್ವರನ್ನ ಧಾರವಾಡ ಉಪನಗರ ಠಾಣೆ ಪೊಲೀಸರು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡ ತಾಲೂಕಿನ ಬಾಡದ ರಜಾಕ ಕವಲಗೇರಿ ಎಂಬಾತ ಬೈಕಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಹಳಿಯಾಳ ಮೇಲು ಸೇತುವೆಯ ಬಳಿ ಹೊಂಚು ಹಾಕಿ ಕುಳಿತು, ಆತ ಬಂದ ತಕ್ಷಣ ಮೇಲೆರಗಿ ಹರಿತವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿದ್ದರು.

ಪ್ರಕರಣದ ಜಾಡು ಹಿಡಿದ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ. ಕಲಘಟಗಿಯ ಜೋಯಾ ಬೇಕರಿಯಲ್ಲಿ ಕೆಲಸ ಮಾಡುತ್ತಿರುವ ದಾವಲಮಲ್ಲೀಕ್ ಅಲಿಯಾಸ್ ಮಲೀಕ್ ಶರೀಫಸಾಬ ಕವಲಗೇರಿ, ಕಂಪ್ಯೂಟರ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಾದಾಕಲಂದರ ಶರೀಫಸಾಬ ಕವಲಗೇರಿ, ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿಯ ಶಾಂತಿನಗರ ಪ್ಲಾಟ್ ನಿವಾಸಿಯಾಗಿ, ಬೇಕರಿ ಕೆಲಸ ಮಾಡುತ್ತಿರುವ ಮೆಹಬೂಬಸಾಬ ಶರೀಫಸಾಬ ಕವಲಗೇರಿ ಹಾಗೂ ಬಾಡದ ಸುಣಗಾರ ಓಣಿಯಲ್ಲಿ ರೇಡಿಯಂ ಕೆಲಸ ಮಾಡುತ್ತಿರುವ ಬುಡ್ಡೇಸಾಬ ಅಲಿಯಾಸ್ ಶಾನು ಶರೀಫಸಾಬ ಕವಲಗೇರಿ ಎಂದು ಗುರುತಿಸಲಾಗಿದೆ.

ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಅದು ಇಂತಹ ಘಟನೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.


Spread the love

Leave a Reply

Your email address will not be published. Required fields are marked *