Posts Slider

Karnataka Voice

Latest Kannada News

ಡ್ಯೂಟಿಗೆ ಹೊರಟಿದ್ದ ASI ಸಾವು: ಚಾಲಕನ ಸ್ಥಿತಿ ಗಂಭೀರ

1 min read
Spread the love

ಬಳ್ಳಾರಿ: ಚಾಲಕನ ನಿರ್ಲಕ್ಷತನಕ್ಕೆ ಕುರುಗೋಡು ASI ಪ್ರಹ್ಲಾದ್ ಮೃತರಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಕರುಗೋಡು ತಾಲೂಕಿನ ಕಲ್ಲುಕಂಬ ಬಳಿ ಸಂಭವಿಸಿದೆ.

ಕರ್ತವ್ಯಕ್ಕಾಗಿ ಕಂಪ್ಲಿಯಿಂದ ಕುರುಗೋಡಿಗೆ ಹೋಗೊ ಸಂಧರ್ಭದಲ್ಲಿ ಸ್ಕಾರ್ಪಿಯೋ ಜೀಪ್ ಚಾಲಕನ ನಿಯಂತ್ರಣ ತಪ್ಪಿದೆ. ಸ್ಕಾರ್ಪಿಯೋ ವೇಗವಾಗಿ ಚಲಾಯಿಸಿದ್ದಕ್ಕೆ ಜೀಪು ಆಯತಪ್ಪಿ ಮೂರು ಪಲ್ಟಿ ಹೊಡೆದಿದೆ. ಹೀಗಾಗಿ ಕುರುಗೋಡು ASI ಪ್ರಹ್ಲಾದ್ ಹಾಗೂ ಚಾಲಕ ಪಂಪಾಪತಿ ಗಂಭೀರ ಗಾಯಗೊಂಡಿದ್ದರು. ಗಾಯಗೊಂಡ ASI ಪ್ರಹ್ಲಾದರನ್ನ ಬಳ್ಳಾರಿ ವಿಮ್ಸ್ ರವಾನೆ ಮಾಡೋ ಸಂದರ್ಭದಲ್ಲಿ ರಸ್ತೆ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡ ಚಾಲಕ ಪಂಪಾಪತಿಗೆ ಚಿಕಿತ್ಸೆ ಮುಂದುವರೆದಿದ್ದು, ಕುರುಗೋಡು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *