Posts Slider

Karnataka Voice

Latest Kannada News

ಚುನಾವಣೆ ಡ್ಯೂಟಿ ‘ಎಎಸ್ಐ’ರಿಗೆ ಹಾರ್ಟ್ ಅಟ್ಯಾಕ್…!

1 min read
Spread the love

ಬೆಳಗಾವಿ: ಲೋಕಸಭೆಯ ಉಪಚುನಾವಣೆಯ ಕರ್ತವ್ಯ ನಿರ್ವಹಿಸಲು ಬಂದಿದ್ದ ಪೊಲೀಸ್ ಅಧಿಕಾರಿಯೋರ್ವರು, ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬೆಳಗಾಗಿ ಜಿಲ್ಲೆಯ ಘಟಪ್ರಭಾ ಪಟ್ಟಣದ ಎಸ್ ಬಿಟಿ ಪಿಯು ಕಾಲೇಜಿನ ಬಳಿಯಲ್ಲಿ ಸಂಭವಿಸಿದೆ.

ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸ್ ಠಾಣೆಯ ಎಎಸ್ಐ ಜೆ.ಬಿ.ಪೂಜಾರ ಎನ್ನುವವರೇ ಸಾವಿಗೀಡಾಗಿದ್ದಾರೆ.  ಲೋಕಸಭೆ ಉಪಚುನಾವಣೆಗಾಗಿ ಪೂಜಾರ ಅವರನ್ನ ಗೋಕಾಕ್ ವಿಧಾನಸಭೆ ಕ್ಷೇತ್ರದಲ್ಲಿ ಸೆಕ್ಟರ್ ಅಧಿಕಾರಿಯಾಗಿ ನೇಮಿಸಲಾಗಿತ್ತು.

ಶುಕ್ರವಾರ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಘಟಪ್ರಭಾ ಪಟ್ಟಣದ ಎಸ್‍ಬಿಟಿ ಪಿಯು ಕಾಲೇಜಿನ ಬಾತ್‍ರೂಮ್ ಸಮೀಪದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೃತರನ್ನ ಪೂಜಾರ ಅವರ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ.


Spread the love

Leave a Reply

Your email address will not be published. Required fields are marked *

You may have missed