ಬಡವರ ಮಕ್ಕಳ ಶಿಕ್ಷಣ ಸಿಂಚನ: ಗಂಭೀರ ಚಿಂತನೆ ನಡೆಸುವಂತೆ ಹಿರಿಯ ಶಿಕ್ಷಕರ ಮನವಿ…

ಹುಬ್ಬಳ್ಳಿ: ಕೊರೋನಾ ಸಾಂಕ್ರಾಮಿಕ ರೋಗ ಪ್ರತಿಯೊಬ್ಬರ ಜೀವನದಲ್ಲಿ ಹಲವು ಸಮಸ್ಯೆಗಳನ್ನ ತಂದೊಡ್ಡಿದ್ದು, ಬಡವರ ಮಕ್ಕಳ ಶಿಕ್ಷಣವನ್ನೂ ಕಸಿದುಕೊಂಡಿದೆ. ಇದೇ ಕಾರಣಕ್ಕೆ ಹಿರಿಯ ಶಿಕ್ಷಕ ಅಶೋಕ ಸಜ್ಜನ ಅವರು, ಶಿಕ್ಷಣ ಸಚಿವ ಸುರೇಶಕುಮಾರ ಅವರಿಗೊಂದು ಕಾಳಜಿಯುಕ್ತ ಪತ್ರವೊಂದನ್ನ ಬರೆದು ಮನವಿ ಮಾಡಿಕೊಂಡಿದ್ದಾರೆ.

ಬಿಪಿಎಲ್ ಮಕ್ಕಳು ಶಿಕ್ಷಣ ಪಡೆಯುವಲ್ಲಿ ಅತಿಯಾದ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ವಿದ್ಯಾ ಸಿಂಚನ್ ನೀಡುವಲ್ಲಿ ಶಿಕ್ಷಕರಿಗೆ ಅನುಕೂಲಕರ ವಾತಾವರಣ ಸೃಷ್ಟಿ ಮಾಡಲು ಸಚಿವರು ಮುಂದಾಗಿಬೇಕಿದೆ ಎಂದು ಸಜ್ಜನ ಕೋರಿದ್ದಾರೆ.
ಶಿಕ್ಷಣ ಸಚಿವ ಸುರೇಶಕುಮಾರ ಅವರು ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಿದೆ. ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೇಕೆಂದು ಕೇಳಿಕೊಂಡಿರುವ ಹಿರಿಯ ಶಿಕ್ಷಕ ಸಜ್ಜನ ಅವರು, ಶಿಕ್ಷಣ ಸಚಿವರ ಬಗ್ಗೆ ಅತಿಯಾದ ಭರವಸೆಯನ್ನ ವ್ಯಕ್ತಪಡಿಸಿದ್ದಾರೆ.