Posts Slider

Karnataka Voice

Latest Kannada News

ಉಣಕಲ್ ಬಳಿ ವೃದ್ಧನಿಗೆ ಚಾಕು ಇರಿತ- PSI ಸುನೀಲ ನೇತೃತ್ವದಲ್ಲಿ ಮೂವರು “ಪುಂಡರು” ಅಂದರ್…

Spread the love

ನಿಯಮ ಪ್ರಶ್ನಿಸಿದ ವೃದ್ಧನಿಗೆ ಚಾಕು ಇರಿತ: ಮೂವರು ಪುಂಡರ ಬಂಧನ

ಹುಬ್ಬಳ್ಳಿ: ತಪ್ಪು ದಾರಿಯಲ್ಲಿ (ರಾಂಗ್ ಸೈಡ್) ಬಂದಿದ್ದನ್ನು ಪ್ರಶ್ನಿಸಿದ ವೃದ್ಧರೊಬ್ಬರ ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಮೂವರು ಕಿರಾತಕರನ್ನು ವಿದ್ಯಾನಗರ ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ.

​ಉಣಕಲ್ ನಿವಾಸಿ ಯಲ್ಲಪ್ಪ (55) ಹಲ್ಲೆಗೊಳಗಾದವರು. ರಾಂಗ್ ರೂಟ್‌ನಲ್ಲಿ ಬಂದಿದ್ದಕ್ಕೆ ಬುದ್ಧಿವಾದ ಹೇಳಿದ್ದಕ್ಕೆ ಆಕ್ರೋಶಗೊಂಡ ಆರಿಫ್ ಚಾವುಸ್ (19), ಸಾಜೀದ್ ರಸ್ಸಿವಾಲೆ (19) ಹಾಗೂ ಓರ್ವ ಅಪ್ರಾಪ್ತ ಬಾಲಕ ಸೇರಿ ಚಾಕುವಿನಿಂದ ಇರಿದಿದ್ದರು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪಿಎಸ್‌ಐ ಸುನೀಲ್ ನೇತೃತ್ವದ ತಂಡ, ಆರೋಪಿಗಳನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದೆ.


Spread the love

Leave a Reply

Your email address will not be published. Required fields are marked *