Posts Slider

Karnataka Voice

Latest Kannada News

ಗುರೂಜಿಯ ಕೊಲೆಗಾರ “ದುಮ್ಮವಾಡದ ಮಹಾಂತೇಶ ಶಿರೂರ”: ವಾಸ್ತು ದೋಷ….!!!!

Spread the love

ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ಆಧುನಿಕ ಯುಗದ ಸರಳವಾಸ್ತು ಜನಕ ಡಾ.ಚಂದ್ರಶೇಖರ ಗುರೂಜಿಯವರ ಹತ್ಯೆ ಮಾಡಿದ್ದು, ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದಾತ ಎಂಬ ಸತ್ಯ ಬಹಿರಂಗಗೊಂಡಿದೆ.

2016ರ ವರೆಗೆ ಸರಳವಾಸ್ತು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂಲತಃ ದುಮ್ಮವಾಡ ಗ್ರಾಮದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೆವಾಡ ಎಂಬುವವರೇ ಗುರೂಜಿಯವರನ್ನ ಇರಿದು ಕೊಲೆ ಮಾಡಿದ್ದಾರೆಂದು ಗೊತ್ತಾಗಿದೆ.

ಘಟನೆಯ ಬಗ್ಗೆ ಪೊಲೀಸ್ ಕಮೀಷನರ್ ಲಾಬುರಾಮ್ ಹೇಳಿಕೆ ಇಲ್ಲಿದೆ…

ಘಟನೆಯಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿ ಮಹಾಂತೇಶ ಶಿರೂರ, ಗುರೂಜಿಯವರೇ ನಿರ್ಮಾಣ ಮಾಡಿರುವ ಅಪಾರ್ಟ್‌ಮೆಂಟಿನಲ್ಲಿ ವಾಸಿಸುತ್ತಿದ್ದಾನೆ. ಈತನಿರುವ ಅಪಾರ್ಟ್ಮೆಂಟ್ ನಲ್ಲಿ ಡಾ.ಚಂದ್ರಶೇಖರ್ ಗುರೂಜಿಯವರ ಸಹೋದರ ಗುರುಶಿದ್ಧಪ್ಪ ಅಂಗಡಿ ವಾಸಿಸುತ್ತಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕುಲ ಪೊಲೀಸ್ ಠಾಣೆಯಲ್ಲಿ ಮಹಾಂತೇಶ ಶಿರೂರ ಪತ್ನಿ ವನಜಾಕ್ಷಿ ಹಾಗೂ ಗುರೂಜಿಯವರ ಸಹೋದರನ ವಿಚಾರಣೆ ನಡೆಯುತ್ತಿದೆ. ಮಹಾಂತೇಶ ಶಿರೂರ, ಸರಳವಾಸ್ತು ಬಿಟ್ಟ ನಂತರ ಅಲ್ಲಿಂದ ಹೊರ ಬಂದ ಸಿಬ್ಬಂದಿಗಳು ಕೂಡಿಕೊಂಡು ಬೇರೊಂದು ವಾಸ್ತು ಸಂಸ್ಥೆಯನ್ನ ಹುಟ್ಟು ಹಾಕಿದ್ದರಂತೆ. ಈ ವಿಷಯವಾಗಿ ಗುರೂಜಿ ಹಾಗೂ ಮಹಾಂತೇಶ ಶಿರೂರ ನಡುವೆ ‘ಹಾಕ್ಯಾಟ್” ನಡೆದಿತ್ತೆಂದು ಹೇಳಲಾಗಿದೆ.

ಇಬ್ಬರ ನಡುವೆ ಜಾಗದ ವಿಷಯವಾಗಿಯೂ “ಏನೋ” ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಆರೋಪಿಗಳ ಬಂಧನವಾಗಿ, ಸತ್ಯ ಹೊರ ಬರಬೇಕಿದೆ.

ಡಾ.ಚಂದ್ರಶೇಖರ ಗುರೂಜಿ ಎರಡನೇಯ ಮದುವೆಯಾಗಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.

ಬೆಳಗಾವಿ ಬ್ರೇಕಿಂಗ್
ಹುಬ್ಬಳ್ಳಿಯಲ್ಲಿ ಚಂದ್ರಶೇಖರ ಗೂರುಜಿ ಕೊಲೆ ಪ್ರಕರಣ.
ರಾಮದುರ್ಗದಲ್ಲಿ ಇಬ್ಬರು ಆರೋಪಿಗಳ ಬಂಧನ.
ಕೊಲೆ ಬಳಿಕ ರಾಮದುರ್ಗದಲ್ಲಿ ಮರೆಸಿಕೊಂಡಿದ್ದ‌ ಆರೋಪಿಗಳು.
ರಾಮದುರ್ಗದ ಬಸವೇಶ್ವರ ವೃತದಲ್ಲಿ ಇಬ್ಬರು ಆರೋಪಗಳ ಬಂಧನ.
ಕಾರಿನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಪೊಲೀಸರಿಂದ ಬಂಧನ


Spread the love

Leave a Reply

Your email address will not be published. Required fields are marked *