ಹುಬ್ಬಳ್ಳಿ-ಧಾರವಾಡದಲ್ಲಿ ನಾಲ್ವರು ಬೈಕ್ ಕಳ್ಳರ ಬಂಧನ- ಒಂದೂರಿನ ಇಬ್ಬರು, ಅವಳಿನಗರದ ಇಬ್ಬರ ಬಂಧನ…!
1 min readಒಂದೂರಿನ ಜೊತೆಗಾರ ಬೈಕ್ ಕಳ್ಳರನ್ನ ಬಂಧಿಸಿದ ಬೆಂಡಿಗೇರಿ ಠಾಣೆ ಪೊಲೀಸರು..!
ಹುಬ್ಬಳ್ಳಿ: ಅವರಿಬ್ಬರು ಒಂದೇ ಊರಿನಲ್ಲಿ ಆಡಿ ಬೆಳೆದವರು. ಜೊತೆಯಾಗಿದ್ದವರು ಜೊತೆಯಾಗಿಯೇ ಕಳ್ಳತನಕ್ಕೆ ಇಳಿದು, ಇದೀಗ ಜೊತೆ ಜೊತೆಯಾಗಿಯೇ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ.
ಹುಬ್ಬಳ್ಳಿ ಹಾಗೂ ಹಾನಗಲ್ ದಲ್ಲಿ ಬೈಕ್ ಕಳ್ಳತನದ ಬಗ್ಗೆ ಪೊಲೀಸರೆದುರಿಗೆ ಒಪ್ಪಿಕೊಂಡಿರುವವರನ್ನ ಧಾರವಾಡ ಜಿಲ್ಲೆಯ ಹೊಸ ಹಂಚಿನಾಳದ ಅಭಿಷೇಕ ಹನಕನಹಳ್ಳಿ ಹಾಗೂ ಜಗದೀಶ ಬಂಡಿವಾಡ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಲ್ಲಾಪೂರ ಓಣಿಯ ಕಳ್ಳತನ ಮಾಡಿದ ಬೈಕ್ ಹಾಗೂ ಹಾನಗಲ್ ತಾಲೂಕಿನ್ ಅಕ್ಕಿಆಲೂರಿನಲ್ಲಿ ಕದ್ದ ಬೈಕ್ ನ್ನ ವಶಕ್ಕೆ ಪಡೆಯಲಾಗಿದೆ.
ಕಾನೂನು ಸುವ್ಯವಸ್ಥೆ ಡಿಸಿಪಿ ಕೆ.ರಾಮರಾಜನ್ ಹಾಗೂ ಅಪರಾಧ ವಿಭಾಗದ ಡಿಸಿಪಿ ಆರ್.ಬಿ.ಬಸರಗಿ ಮಾರ್ಗದರ್ಶನದಲ್ಲಿ ಬೆಂಡಿಗೇರಿ ಠಾಣೆಯ ಇನ್ಸ್ ಪೆಕ್ಟರ್ ಎಂ.ಎಸ್.ಹೂಗಾರ ನೇತೃತ್ವದ ತಂಡ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಇವರ ಕಾರ್ಯವೈಖರಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಧಾರವಾಡ ಉಪನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಇಬ್ಬರು ಬೈಕ್ ಕಳ್ಳರನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಧಾರವಾಡದ ಸಪ್ತಾಪೂರನಲ್ಲಿ ಹೊಂಡಾ ಶೈನ್ ಹಾಗೂ ಡಿಮಾನ್ಸ್ ಕ್ವಾಟರ್ಸನಲ್ಲಿ ಇಲೆಕ್ಟ್ರಿಕ್ ಹಿರೋ ಸ್ಕೂಟರ ಕಳ್ಳತನವಾಗಿದ್ದರ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಧಾರವಾಡದ ಕೃಷ್ಣಾ ಸಹದೇವಪ್ಪ ಉಪ್ಪಾರ ಹಾಗೂ ಹುಬ್ಬಳ್ಳಿಯ ರಾಘವೇಂದ್ರ ಮಲ್ಲಪ್ಪ ಸಲಗಾರ ಎಂಬುವವರೇ ಬೈಕ್ ಕಳ್ಳರಾಗಿದ್ದು, ಅವರಿಂದ ಎರಡು ಬೈಕ್ ಗಳನ್ನ ವಶಕ್ಕೆ ಪಡೆಯಲಾಗಿದೆ.
ಡಿಸಿಪಿಗಳ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಪ್ರಮೋದ ಯಲಿಗಾರ ತಂಡವೂ ಆರೋಪಿಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದೆ.