Big Exclusive: ಅಂಜಲಿ ಅಂಬಿಗೇರ “ಕೊಂದ” ಆರೋಪಿ ವಿಶ್ವನಾಥ ಅರೆಸ್ಟ್…!!! ಫಲಿಸಿತು ಪೊಲೀಸ್ ಕಮೀಷನರ್ ಪ್ಲಾನ್…!!!

ಹುಬ್ಬಳ್ಳಿ: ಕಳೆದ ನಲ್ವತ್ತು ಗಂಟೆಗಳ ಹಿಂದೆ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಪೊಲೀಸರು ಯಶಸ್ವಿಯಾಗಿದ್ದು, ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರ ಪ್ಲಾನ್ ವರ್ಕ್ಔಟ್ ಆಗಿದೆ.
ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿ ಅಂಜಲಿ ಅಂಬಿಗೇರ ಎಂಬ ಯುವತಿಯನ್ನ ಬುಲೆಟ್ ಕಳ್ಳ ವಿಶ್ವನಾಥ ಅಲಿಯಾಸ್ ಗಿರಿ ಅಲಿಯಾಸ್ ಗಿರೀಶ ಮನೆಗೆ ನುಗ್ಗಿ ಹತ್ಯೆ ಮಾಡಿ ಪರಾರಿಯಾಗಿದ್ದ.
ಈ ಬಗ್ಗೆ ಎರಡು ತಂಡಗಳನ್ನ ರಚನೆ ಮಾಡಿದ್ದ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಪ್ರತಿಯೊಂದು ಪ್ರಮುಖ ಸಿಸಿಟಿವಿ ದೃಶ್ಯಗಳನ್ನ ಪರಿಶೀಲನೆ ಮಾಡಿ, ಕೊನೆಗೆ ದಾವಣಗೆರೆಯಲ್ಲಿ ಆರೋಪಿ ಇರುವುದನ್ನ ಪತ್ತೆ ಹಚ್ಚಿ ಬಂಧಿಸಿದ್ದಾರೆ.