Posts Slider

Karnataka Voice

Latest Kannada News

ಬೆಳವಟಗಿ ಗ್ರಾಪಂ ಅಧ್ಯಕ್ಷೆಯ ದಿಟ್ಟ ನಿಲುವು: ಸಾರಾಯಿ ಮುಕ್ತ ಮಾಡಲು ಪಣ…!

Spread the love

ನವಲಗುಂದ: ತಾಲೂಕಿನ ಬೆಳವಟಗಿ ಗ್ರಾಮವನ್ನ ಸರಾಯಿ ಮುಕ್ತ ಮಾಡಬೇಕೆಂದು ಗ್ರಾಮ ಪಂಚಾಯತಿ ಮಹಿಳಾ ಅಧ್ಯಕ್ಷೆಯೋರ್ವರು ದಿಟ್ಟ ಹೋರಾಟಕ್ಕೆ ಮುಂದಾಗಿದ್ದು, ಇಡೀ ಗ್ರಾಮ ಪಂಚಾಯತಿ ಬೆಂಬಲವಾಗಿ ನಿಂತಿರುವ ಅಪರೂಪದ ಪ್ರಕರಣವಿದಾಗಿದೆ.

ಹೋರಾಟದ ವೀಡಿಯೋ ಇಲ್ಲಿದೆ ನೋಡಿ

ಬೆಳವಟಗಿ ಗ್ರಾಮದಲ್ಲಿ ನಿರಂತರವಾಗಿ ಕೆಲವರು ಸರಾಯಿ ಮಾರಾಟವನ್ನ ಮಾಡುತ್ತಿದ್ದಾರೆ. ಪೊಲೀಸರ ಮತ್ತು ಪಂಚಾಯತಿಯವರ ಕಣ್ಣು ತಪ್ಪಿಸಿ ದಂಧೆ ನಡೆಯುತ್ತಿದೆ. ಇದರಿಂದ ರೋಸಿ ಹೋದ ಪಂಚಾಯತಿಯವರೇ ಗ್ರಾಮದಲ್ಲಿ ಜನಜಾಗೃತಿ ಅಭಿಯಾನವನ್ನ ಹಮ್ಮಿಕೊಂಡಿದ್ದರು.

ಗ್ರಾಮ ಪಂಚಾಯತಿಯ ಹೋರಾಟಕ್ಕೆ ಸ್ತ್ರೀಶಕ್ತಿ ಸಂಘಗಳು, ಸ್ಥಳೀಯರು ಕೂಡಾ ಸಾಥ್ ನೀಡಿದ್ದರು. ಗ್ರಾಮದಲ್ಲಿ ಅವ್ಯವಹಾರಕ್ಕೆ ಮುಂದಾಗಿರುವವರಿಗೆ ಎಚ್ಚರಿಕೆ ನೀಡಲಾಗಿದ್ದು, ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಗ್ರಾಮ ಪಂಚಾಯತ ಅಧ್ಯಕ್ಷೆ ಸುಮಿತ್ರಾ ಕರಾಂಡೆ, ಉಪಾಧ್ಯಕ್ಷ ಶಿವಾನಂದ ಮಣಿಕಟ್ಟಿ, ಸದ್ಯಸರಾದ ಪ್ರಭುಗೌಡ ಪಾಟೀಲ್, ಶಿದ್ದಪ್ಪ ಅಕ್ಕಿ, ಗಂಗವ್ವ ಕೌಜಗೇರಿ,  ಶಾಂತವ್ವ ಹರಪನಹಳ್ಳಿ, ದೇವಕ್ಕ ಶಿದ್ದಗಿರಿ, ಶೇಕವ್ವ ತಳವಾರ, ಗಿರಿಜವ್ವ ಮರೀಗೌಡ್ರ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಹಂಪಿಹೊಳಿ, ದಲಿತ ಸಂಘದ ಸಂಚಾಲಕ ನಿಂಗಪ್ಪ ಕೆಳಗೇರಿ, ರೈತ ಸಂಘದ ಅಧ್ಯಕ್ಷ ರವಿ ಬಾಜಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *