ನಾನೂ ನೋಡಿದ ಮೊದಲ ವೀರ- ಅಪ್ಪಾ ಐ ಲವ್ ಯೂ ಪಾ…
1 min readಹುಬ್ಬಳ್ಳಿ: ತನ್ನ ಮಗ ಚೆನ್ನಾಗಿ ಓದಲಿ ಅಂದುಕೊಂಡು ತಾನೇ ಮನೆ ಹೊರಗೆ ಹೋಗಿ ಕೂಡುತ್ತಿದ್ದ ಅಪ್ಪನ ಪ್ರೀತಿಯನ್ನ ಮಗ ಹೆಚ್ವು ಅಂಕ ಪಡೆಯುವ ಮೂಲಕ ಸಾರ್ಥಕಗೊಳಿಸಿದ್ದಾನೆ.
ಗೋಪನಕೊಪ್ಪದ ಸರಕಾರಿ ಕಾಲೇಜಿನ ವಿದ್ಯಾರ್ಥಿ ಗಣೇಶ ಕಲಾ ವಿಭಾಗದಲ್ಲಿ 95.16 ಪ್ರತಿಶತ ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾನೆ.
ಅಪ್ಪಟ ಗ್ರಾಮೀಣ ಪ್ರತಿಭೆಯಾದ ಹುಬ್ಬಳ್ಳಿ ತಾಲೂಕಿನ ರಾಮಾಪುರ ಗ್ರಾಮದ ಗಣೇಶ ಒಂದೇ ಒಂದು ದಿನ ಟ್ಯೂಷನ್ಗೆ ಹೋಗಿಲ್ಲ. ಆದರೂ, ಆತನ ಶ್ರಮ ಬಿಟ್ಟಿಲ್ಲ. ಹೀಗಾಗಿ ಯಶಸ್ಸು ಆತನೊಂದಿಗಿದೆ.
ಇದನ್ನೇಲ್ಲ ಹೇಗೆ ಮಾಡ್ದಿ, ಎಂದು ಬಿಟಿವಿ ಪ್ರಶ್ನಿಸಿದಾಗ ಗಣೇಶ, ‘ಸರ್, ದಿನಾನೂ ಎಂಟು ಗಂಟೆ ಓದ್ತಿದ್ದಾರ್ರೀ. ಬೆಳಿಗ್ಗೆ ನಾಕಕ್ಕ್ ಎದ್ದ ಟೈಮ್ ಟೇಬಲ್ ಹಾಕ್ಕೊಂಡು ಅಭ್ಯಾಸ ಮಾಡೇನ್ರೀ’ ಎನ್ನುತ್ತಲೇ ತನ್ನಪ್ಪ ತನ್ನ ಓದಿಗಾಗಿ ಮನೆಯ ಹೊರ ಭಾಗದಲ್ಲಿ ಕೂಡುತ್ತಿದ್ದ ಎಂದು ಹೇಳಿಕೊಂಡ.
ಶ್ರಮವಹಿಸುವ ಇಂತವರಿಗೆ ಸರಸ್ವತಿ ಒಲಿದು ಬರುವುದು ಸಹಜ. ಗಣೇಶನಿಗೆ ಸರಸ್ವತಿಯ ಆಶೀರ್ವಾದ ಮತ್ತಷ್ಟು ಹೆಚ್ಚಾಗಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ.