“ಅಣ್ಣಿಗೇರಿ-ಅಳ್ನಾವರ-ಕಲಘಟಗಿ” ಬರಗಾಲ ಘೋಷಣೆಗೆ ಆಗ್ರಹಿಸಿ “ಬೀದಿಗಿಳಿದ ಬಿಜೆಪಿಗರು”….
1 min readಧಾರವಾಡ: ಜಿಲ್ಲೆಯ ಅಣ್ಣಿಗೇರಿ, ಕಲಘಟಗಿ ಮತ್ತು ಅಳ್ನಾವರ ತಾಲ್ಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಣೆ ಮಾಡದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.
ಅಣ್ಣಿಗೇರಿ ನಗರದ ಶ್ರೀ ಅಮೃತೇಶ್ವರ ದೇಸವಸ್ಥಾನದಿಂದ ಸುಮಾರು 4 ಕಿಮೀ ವರೆಗೆ ಸಾವಿರಾರು ರೈತರೊಂದಿಗೆ ಅಣ್ಣಿಗೇರಿಯ ಪ್ರಮುಖ ಬಿದಿಗಳಲ್ಲಿ ಪಾದಯಾತ್ರೆ ಮೂಲಕ ಮತ್ತು ಕಲಘಟಗಿ ನಗರದ ಎ.ಪಿ.ಎಂ.ಸಿ ಯಿಂದ ಮುಖ್ಯರಸ್ತೆಯ ಮಾರ್ಗವಾಗಿ ಬೃಹತ್ ಪ್ರತಿಭಟನೆ ಮಾಡಲಾಯಿತು.
ವೀಡಿಯೋ…
ಕೆಲ ಗಂಟೆಗಳ ಕಾಲ ಅಣ್ಣಿಗೇರಿ ನವಲಗುಂದ ರಸ್ತೆ, ಕಲಘಟಗಿಯಲ್ಲಿ ರಸ್ತೆ ತಡೆ ಮಾಡಿ ನಂತರ ಜನಸಂಘದಿಂದ ಹೋರಾಟದ ಮನೋಭಾವನೆಯನ್ನು ಹೊಂದಿರುವ ಸಾಮಾನ್ಯ ಕಾರ್ಯಕರ್ತರಾಗಿ ಇಂದು ಸ್ವಯಂಪ್ರೇರಿತವಾಗಿ ರೈತ ಹೋರಾಟದಲ್ಲಿ ಭಾಗವಹಿಸಿದ್ದ 89 ವರ್ಷದ ಹಿರಿಯ ಮಹಾಂತಪ್ಪ ಕಲ್ಲೂರ, ಅಣ್ಣಿಗೇರಿ ಹಾಗೂ ಕಲಘಟಗಿ ನಗರದಲ್ಲಿ ಪ್ರಮುಖರ ಉಪಸ್ಥಿತಿಯಲ್ಲಿ ಎರಡು ತಾಲೂಕಿನ ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ತತಕ್ಷಣದಲ್ಲಿ ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಿ ಪರಿಹಾರ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು ಹಾಗೂ ಜಾನುವಾರುಗಳಿಗೆ ಮೇವು ಪೂರೈಸಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಧಾ.ಗ್ರಾ. ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಮಾಜಿ ವಿ.ಪ.ಸದಸ್ಯ ನಾಗರಾಜ ಛಬ್ಬಿ, ಷಣ್ಮುಖ ಗುರಿಕಾರ, ಶರಣಪ್ಪಗೌಡ ದಾನಪ್ಪಗೌಡ್ರ, ಬಸವರಾಜ ಶೆರೆವಾಡ, ಕಲ್ಮೇಶ ಬೇಲೂರ, ಸಿದ್ದನಗೌಡ ಪಾಟೀಲ, ಸದಾನಂದ ಚಿಂತಾಮನಿ, ರಾಘವೇಂದ್ರಗೌಡ ಪಾಟೀಲ, ಶಿವಾನಂದ ಹೊಸಳ್ಳಿ, ಬಸವರಾಜ ಯಳವತ್ತಿ, ರೈತಾಪಿ ವರ್ಗ, ಪ್ರಮುಖ ಕಾರ್ಯಕರ್ತರು, ಪುರಸಭೆ ಸದಸ್ಯರು, ಪದಾಧಿಕಾರಿಗಳು, ಬೂತ್ ಸದಸ್ಯರು ಊರಿನ ಪ್ರಮುಖರು ಈ ಹೋರಾಟದಲ್ಲಿ ಭಾಗವಹಿಸಿದ್ದರು.