Posts Slider

Karnataka Voice

Latest Kannada News

ಬೆಂಗೇರಿಯ ಗಿರೀಶ ಕಾಲಗಗ್ಗರಿ ಅಂದರ್-ಬಾಹರ್ ನಲ್ಲಿ ಪೊಲೀಸರಿಂದ ಬಂಧನ…!

1 min read
Spread the love

ಹುಬ್ಬಳ್ಳಿ: ನಗರದ ಬೆಂಗೇರಿ ವೃತ್ತದ ಬಳಿಯಿರುವ ಕಾಲಗಗ್ಗರಿಯವರ ಮನೆಯ ಮಹಡಿಯ ಮೇಲಿನ ರೂಂನೊಳಗೆ ಅಂದರ್-ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿ, ಏಳು ಜನರನ್ನ ಬಂಧನ ಮಾಡಿದ ಘಟನೆ ನಡೆದಿದೆ.

ಬಂಧಿತರನ್ನ ಗಿರೀಶ ಲಕ್ಷ್ಮಣ ಕಾಲಗಗ್ಗರಿ, ಹನಮಂತ ಮಹದೇವಪ್ಪ ವಾಲಿಕಾರ, ಸುರೇಶ ಬಸಪ್ಪ ಕಲ್ಲಣ್ಣನವರ, ಅಶೋಕ ಪಕ್ಕೀರಪ್ಪ ಅಂಗಡಿ, ಅರ್ಜುನ ಪರಪ್ಪ ಮಳಗಿ, ಮೌಲಾಸಾಬ ಇಮಾಮಸಾಬ ಅಗಸಿಮನಿ ಹಾಗೂ ಕಾಶೀಮ ಅಬ್ದುಲಸಾಬ ಮುಲ್ಲಾ ಎಂದು ಗುರುತಿಸಲಾಗಿದೆ.

ಬಂಧಿತರಿಂದ 13120 ರೂಪಾಯಿ ನಗದು, ನಾಲ್ಕು ವಿವಿಧ ಕಂಪನಿಗಳ ಮೊಬೈಲ್ ಹಾಗೂ ಇಸ್ಪೀಟ್ ಎಲೆಗಳನ್ನ ವಶಕ್ಕೆ ಪಡೆಯಲಾಗಿದೆ. ಕೇಶ್ವಾಪುರ ಠಾಣೆಯ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ಮಾಡಿ, ಆರೋಪಿಗಳನ್ನ ಬಂಧನ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *