ಕಲಘಟಗಿಯಲ್ಲಿ ಅಂದರ್-ಬಾಹರ್: ನಿಂಬಣ್ಣನವರ ಬಂಧನ

ಕಲಘಟಗಿ: ತಾಲೂಕಿನ ಬೀರವಳ್ಳಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ಅಂದರ್-ಬಾಹರ್ ಆಡುತ್ತಿದ್ದ ತಂಡದ ಮೇಲೆ ದಾಳಿ ಮಾಡಿರುವ ಕಲಘಟಗಿ ಠಾಣೆಯ ಪೊಲೀಸರು ಆರು ಜನರನ್ನ ಬಂಧನ ಮಾಡಿದ್ದು, ಮೂವರು ಪರಾರಿಯಾದ ಘಟನೆ ನಡೆದಿದೆ.

ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಆಡುತ್ತಿದ್ದ ಬೀರವಳ್ಳಿ ಗ್ರಾಮದ ದೇವೆಂದ್ರ ಕಲ್ಲಪ್ಪ ತಾಳಿಕೋಟಿ, ನಾಗರಾಜ ಶಿವಲಿಂಗಪ್ಪ ಹೂಗಾರ, ಸಂಗೇದೇವರಕೊಪ್ಪದ ಸಂಗಪ್ಪ ನಿಂಬಣ್ಣ ನಿಂಬಣ್ಣನವರ, ತಬಕದಹೊನ್ನಳ್ಳಿ ಗ್ರಾಮದ ಮುದಕಪ್ಪ ಭೀಮಪ್ಪ ಗೋವಿಂದನವರ, ಬೀರವಳ್ಳಿಯ ಸಂಗಪ್ಪ ಕರತಂಗಿ ಹಾಗೂ ತಬಕದಹೊನ್ನಳ್ಳಿ ಚೆನ್ನಪ್ಪ ಬಸಣ್ಣನವರ ಬಂಧನ ಮಾಡಲಾಗಿದೆ.
ಅಂದರ್-ಬಾಹರ್ ದಲ್ಲಿ ತೊಡಗಿದ್ದ ಬೀರವಳ್ಳಿ ಗ್ರಾಮದವರಾದ ಮಾದೇವ ಅಗಸಿಮನಿ, ನಾಗಪ್ಪ ಕಡೇಮನಿ ಹಾಗೂ ಕುಮಾರ ಪಲ್ಲೇದ ಪರಾರಿಯಾಗಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಕಲಘಟಗಿ ಠಾಣೆಯ ಪೊಲೀಸರು, ತಪ್ಪಿಸಿಕೊಂಡಿರುವ ಮೂವರ ಪತ್ತೆಗಾಗಿ ಜಾಲ ಬೀಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ, ಹಲವರು ಸಿಕ್ಕಿದ್ದು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.