Posts Slider

Karnataka Voice

Latest Kannada News

ಹೃದಯಗಳಿಗೆ ಮಿಡಿದ “ಪ್ರಿಯಾ ಅಮೃತ ದೇಸಾಯಿ”- ಬಡವರ ಮನೆಬಾಗಿಲಲ್ಲಿ ಚಿಕಿತ್ಸೆ…

Spread the love

ಧಾರವಾಡ: ಹೃದಯ ಖಾಯಿಲೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೃದಯಗಳ ಮಿಡಿಯುವ ಕಾರ್ಯಕ್ರಮವನ್ನ ಧಾರವಾಡ ತಾಲೂಕಿನ ಮಾದನಭಾವಿ ಗ್ರಾಮದಲ್ಲಿ ಆಯೋಜನೆ ಮಾಡಲಾಗಿತ್ತು.

ಶಾಸಕ ಅಮೃತ ದೇಸಾಯಿ ಗೆಳೆಯರ ಬಳಗ ಹಾಗೂ SDM ವತಿಯಿಂದ ಆಯೋಜನೆಗೊಂಡ ಉಚಿತ ಹೃದಯ ತಪಾಸಣೆಯಲ್ಲಿ 300ಕ್ಕೂ ಹೆಚ್ಚು ಸಾರ್ವಜನಿಕರು ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಿಯಾ ಅಮೃತ ದೇಸಾಯಿ ಅವರು ಮಾತನಾಡಿ, ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಈ ಸಂಬಂಧವಾಗಿ ಗೆಳೆಯರ ಬಳಗ ಉತ್ತಮ ಕಾರ್ಯವನ್ನ ನಿರ್ವಹಿಸುತ್ತಿದೆ ಎಂದರು.

ಮಂಡಲ ಅಧ್ಯಕ್ಷ ರುದ್ರಪ್ಪ ಹರಿವಾಳ, ಪ್ರಧಾನ ಕಾರ್ಯದರ್ಶಿ ಸಂಭಾಜಿ ಜಾಧವ, ವಿಠ್ಠಲ ಪೂಜಾರ, ಪ್ರಕಾಶಗೌಡ ಪಾಟೀಲ, ಮಂಜು ಕೆರಾಳಿ, ವಿಠ್ಠಲ ಕಂಬಾರಗನಿ, ಮಡಿವಾಳೆಪ್ಪ ದೊಡ್ಡವಾಡ ಸೇರಿದಂತೆ ಮಾದನಭಾವಿ ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *