Posts Slider

Karnataka Voice

Latest Kannada News

ಹುಬ್ಬಳ್ಳಿ: ಕೋಟಿ ಕೋಟಿ ಹಣ ಪತ್ತೆ- ತಪ್ಪಿಸಿಕೊಂಡ ಕಾರು ಚೇಸಿಂಗ್… Big Exclusive

Spread the love

ಹುಬ್ಬಳ್ಳಿ: ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಕೋಟಿ ಕೋಟಿ ಹಣವನ್ನು ಪೊಲಿಸರು ವಶಕ್ಕೆ ಪಡೆದಿರುವ ಘಟನೆ ಕುಂದಗೋಳ ತಾಲೂಕಿನ ರಾಮನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಶಿಗ್ಗಾಂವಿಯಿಂದ ಬ್ರಿಜಾ ಕಾರಿನಲ್ಲಿ ಹಣವಿದ್ದ ಬ್ಯಾಗುಗಳೊಂದಿಗೆ ಪರಾರಿಯಾಗುತ್ತಿದ್ದ ಕಾರನ್ನ ಬೆನ್ನು ಹತ್ತಿದ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿಗಳ ಕಣ್ತಪ್ಪಿಸಿ ರಾಮನಕೊಪ್ಪ ಗ್ರಾಮದ ನಿಂಗಪ್ಪ ಜಟಾರ್ ಎನ್ನುವವರ ಮನೆಗೆ ಹಣ ತಂದವರು ತಪ್ಪಿಸಿಕೊಳ್ಳಲು ವಿಫಲ ಯತ್ನ ನಡೆಸಿದ್ದಾರೆ.

Exclusive video…

ಈ ವೇಳೆ ಹಣದ ಕುರಿತು ದಾಖಲೆ ನೀಡುವಂತೆ ಕೇಳಿದ ಚುನಾವಣಾ ಅಧಿಕಾರಿಗಳಿಗೆ ಹೊಲ ಮಾರಾಟಕ್ಕೆ ತಂದಿದ್ದ ಹಣ ಅಂದಾಜು 2ಕೊಟಿ ಐದು ಲಕ್ಷ ರೂಪಾಯಿಗಳಿವೆ ಎಂದಿದ್ದಾರೆ.

ಈ ವೇಳೆ ಆದಾಯ ತೆರಿಗೆ ಇಲಾಖೆ ಜಿಲ್ಲಾ ನೋಡಲ್ ಅಧಿಕಾರಿಗಳಾದ ಫಕ್ಕಿರೇಶ ಬಾದಾಮಿ ಇದ್ದರು.

ಇನ್ನೂ ಸುದ್ದಿ ತಿಳಿದು ಸ್ಥಳಕ್ಕಾಮಿಸಿದ ಧಾರವಾಡ ಜಿಲ್ಲಾ ಪೊಲಿಸ್ ವರಿಷ್ಠಾದಿಕಾರಿ ಗೋಪಾಲ ಬ್ಯಾಕೋಡ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ, ಹುಬ್ಬಳ್ಳಿ ಗ್ರಾಮಿಣ ಭಾಗದ ಪೊಲಿಸ್ ಇನ್ಸ್‌ಪೆಕ್ಟರ್ ಮುರಗೇಶ ಚೆನ್ನಣ್ಣವರ್ ಕುಂದಗೋಳ ಭಾಗದ ಇನ್ಸ್ಪೆಕ್ಟರ್ ಶಿವಾನಂದ ಅಂಬಿಗೇರ್ ಆಗಮಿಸಿ ತನಿಖೆಯನ್ನ ಮುಂದುವರೆಸಿದ್ದಾರೆ.


Spread the love

Leave a Reply

Your email address will not be published. Required fields are marked *