Posts Slider

Karnataka Voice

Latest Kannada News

ದ್ವೇಷಕ್ಕಾಗಿ ಅಮ್ಮಿನಬಾವಿಯಲ್ಲಿ ಮನೆಗೆ ಬೆಂಕಿಯಿಟ್ಟ ಭೂಪರು…!

1 min read
Spread the love

ಧಾರವಾಡ: ಖಾಲಿ ಜಾಗದಲ್ಲಿ ಸಂಚರಿಸುವ ಸಂಬಂಧ ದ್ವೇಷಾಸೂಯೆಯಿಂದ ಮಹಿಳೆಯನ್ನ ಎಳೆದಾಡಿ, ಮನೆಗೆ ಬೆಂಕಿ ಹಚ್ಚಿ ಸುಡಲು ಯತ್ನಿಸಿದ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿಯಲ್ಲಿ ಗ್ರಾಮದಲ್ಲಿ ಸಂಭವಿಸಿದೆ.

ರಸೂಲಸಾಬ ಬೇಪಾರಿ ಎಂಬುವವರ ಮನೆಯಲ್ಲಿ ಮಧ್ಯಾಹ್ನವೇ ಯಾರೂ ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿರುವ ಮುರುಗೇಶ ಸಾಬಣ್ಣ ಗಾಡದ, ಪ್ರಕಾಶ ವಿರುಪಾಕ್ಷಿ ಗುಳೇದಕೊಪ್ಪ ಹಾಗೂ ಫಕ್ಕೀರಪ್ಪ ಸಾಬಣ್ಣ ಗಾಡದ ಕೂಡಿಕೊಂಡು ಮನೆಗೆ ಬೆಂಕಿ, ಕೆಲವು ವಸ್ತುಗಳನ್ನ ಸುಟ್ಟು ಕರಕಲು ಮಾಡಿದ್ದಾರೆ.

ಘಟನೆಯಿಂದ ಅಮ್ಮಿನಬಾವಿಯಲ್ಲಿ ಕೆಲವು ಸಮಯ ತ್ವೇಷಮಯ ವಾತಾವರಣ ಉಂಟಾಗಿತ್ತು. ಬೆಂಕಿ ಹಚ್ಚಿದ ಪರಿಣಾಮ, ಮನೆಯಲ್ಲಿನ ಹಲವು ವಸ್ತುಗಳು ಸುಟ್ಟು ಕರಕಲಾಗಿವೆ.

ಘಟನೆಗೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *