Posts Slider

Karnataka Voice

Latest Kannada News

ಅಂಬ್ಯುಲೆನ್ಸದಲ್ಲೇ ಹರಿಗೆ: “ಕರ್ಮಯೋಗಿ” ರಾಜಕುಮಾರ ಕಾಂಬ್ಳೆ..!

Spread the love

ಹುಬ್ಬಳ್ಳಿ: ಗರ್ಭಿಣಿ ಮಹಿಳೆಯನ್ನ ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯದಲ್ಲೇ ಹೆರಿಗೆಯಾದ ಘಟನೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಬಳಿಯಲ್ಲಿ ನಡೆದಿದೆ.

ಚಂದ್ರಾಪುರದ ಗ್ರಾಮದ ಶಾಹಿನ್ ಶೌಕತ್ ಅಲಿ ಸೌದಾಗಾರ ಎಂಬ ಮಹಿಳೆಗೆ ತೀವ್ರ ಥರದ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಂಬ್ಯುಲೆನ್ಸಗೆ ಕಾಲ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೈಲಟ್ ದೇವೇಂದ್ರ ಗಂಗಾಧರ ಎಂಬುವವರು ಮಹಿಳೆಯನ್ನ ತರುವಾಗಲೇ, ತೀವ್ರ ಥರದ ನೋವು ಮಹಿಳೆಗೆ ಕಾಣಿಸಿಕೊಂಡಿದೆ.

ಅಂಚಟಗೇರಿ ಬಳಿಯೇ ಅಂಬ್ಯುಲೆನ್ಸ್ ನಿಲ್ಲಿಸಿ ಹೆರಿಗೆಯನ್ನ ಮಾಡಿಸಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು ಸ್ಟಾಫ್ ನರ್ಸ್ ರಾಜಕುಮಾರ ಕಾಂಬ್ಳೆ. ಗರ್ಭಿಣಿ ಮಹಿಳೆಗೆ ಹೆಣ್ಣು ಮಗು ಜನಿಸಿದ್ದು, ತಾಯಿ ಮಗು ಕ್ಷೇಮವಾಗಿದೆ.

ಅಂಬ್ಯುಲೆನ್ಸನಲ್ಲಿ ಮಹಿಳೆಗೆ ಹೆರಿಗೆ ನೋವು ಹೆಚ್ಚಾದಾಗ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಆ ಆತಂಕವನ್ನೇಲ್ಲ ದೂರು ಮಾಡಿದ್ದು ಸ್ಪಾಫ್ ನರ್ಸ್ ರಾಜಕುಮಾರ ಕಾಂಬ್ಳೆ ಹಾಗೂ ಪೈಲಟ್ ದೇವೇಂದ್ರಗೆ ಮಹಿಳೆಯ ಸಂಬಂಧಿಕರು ಕೈಮುಗಿದು ಧನ್ಯವಾದ ತಿಳಿಸಿದರು.


Spread the love

Leave a Reply

Your email address will not be published. Required fields are marked *