ಪಕ್ಷ ಬಲವರ್ಧನೆ ಮುಂದಾದ ಕಾಂಗ್ರೆಸ್ ಹೈಕಮಾಂಡ್..
1 min readನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಮುಂದಾಗಿರುವ ಹೈಕಮಾಂಡ್ ಮತ್ತೆ ಇಬ್ಬರು ಕಾರ್ಯಾಧ್ಯಕ್ಷರನ್ನ ನೇಮಕ ಮಾಡುವ ಮೂಲಕ, ಮತ್ತಷ್ಟು ಬಲಗೊಳ್ಳುವ ಯತ್ನಕ್ಕೆ ಕೈ ಹಾಕಿದೆ.
ರಾಜ್ಯ ಕಾಂಗ್ರೆಸನಲ್ಲಿ ಈಗಾಗಲೇ ಮೂವರು ಕಾರ್ಯಾಧ್ಯಕ್ಷರಿದ್ದು, ಮತ್ತೆ ಇಬ್ಬರನ್ನ ಮಾಡುವ ಮೂಲಕ ಜಾತಿವಾರು ಲೆಕ್ಕಾಚಾರದಲ್ಲೂ ಕಾಂಗ್ರೆಸ್ ಮುನ್ನುಡಿ ಬರೆಯತೊಡಗಿದೆ. ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ದೃವ ನಾರಾಯಣ ಅವರನ್ನ ನೂತನವಾಗಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವ ಎಐಸಿಸಿ, ರಾಜ್ಯದಲ್ಲಿ ಮುಂಬರುವ ದಿನದಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ಕೊಡಲು ಮುಂದಾಗಿದೆ.
ಅಲ್ಪಸಂಖ್ಯಾತ ಮುಖಂಡರಾಗಿದ್ದ ಸಲೀಂ ಅಹ್ಮದ, ಲಿಂಗಾಯತ ಮುಖಂಡ ಈಶ್ವರ ಖಂಡ್ರೇ ಹಾಗೂ ಎಸ್ಟಿ ಸಮುದಾಯದ ಸತೀಶ ಜಾರಕಿಹೊಳಿಯವರು ಈಗಾಗಲೇ ಕಾರ್ಯಾಧ್ಯಕ್ಷರಿದ್ದರು. ಈಗ ಮತ್ತೆ ಇಬ್ಬರನ್ನ ಮಾಡುವ ಮೂಲಕ ರಾಜ್ಯದಲ್ಲಿ ಐವರು ಕಾಂಗ್ರೆಸ್ ಕಾರ್ಯಾಧ್ಯಕ್ಷರು ಪಕ್ಷವನ್ನ ಸಂಘಟನೆ ಮಾಡಲಿದ್ದಾರೆ.