ನೀವ್ ಪೊಲೀಸ್ರು ನಮ್ಮಿಂದ ಏನೂ ಕಿತ್ಕೋಳ್ಳೋಗಾಲ್ಲ- ತಾಯಪ್ಪ ಪವಾರ A1…

ಧಾರವಾಡ: ಇಬ್ಬರು ಸುಶಿಕ್ಷಿತ ಮಹಿಳೆಯರು ಬಸ್ಸಿನಲ್ಲಿ ಬಡಿದಾಡಿಕೊಂಡ ಪ್ರಕರಣವೊಂದು ಬೇರೆಯದ್ದೆ ಸ್ವರೂಪ ಪಡೆದಿದ್ದು, ವಕೀಲರು ಪೊಲೀಸರ ಮೇಲೆ ದೂರು ದಾಖಲಿಸಿದ ನಂತರ ಇದೀಗ ಪೊಲೀಸರು ವಕೀಲನ ಮೇಲೆ ದೂರು ದಾಖಲು ಮಾಡುವ ಮೂಲಕ ಮುಯ್ಯಿಗೆ ಮುಯ್ಯಿ ತೀರಿಸಿದ್ದಾರೆ.
ತಾಯಪ್ಪ ಪವಾರ ಸೇರಿದಂತೆ ಹಲವರು ಉಪನಗರ ಠಾಣೆಯ ಪೊಲೀಸರು ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲು ಮಾಡಿದ್ದರು. ಇದಾದ ಕೆಲ ಸಮಯದಲ್ಲಿ ತಾಯಪ್ಪ ಪವಾರ ಸೇರಿದಂತೆ ಏಳು ಜನರ ಮೇಲೆ ಅದೇ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ತಾನು ಪ್ರಭಾವಿ ವಕೀಲ ಇದ್ದೇನೆ. ಸುಳ್ಳು ಅಟ್ರಾಸಿಟಿ ಕೇಸು ದಾಖಲಿಸಿ ನಿಮ್ಮನ್ನ ಜೈಲಿಗೆ ಹಾಕಿಸುತ್ತೇನೆ ಎಂದು ವಕೀಲ ತಾಯಪ್ಪ ಪವಾರ ಹೇಳಿದ್ದಾರೆಂದು FIR ನಲ್ಲಿ ನಮೂದು ಮಾಡಲಾಗಿದೆ.
ಸರಕಾರದ “ಶಕ್ತಿ” ಯೋಜನೆಯು ಧಾರವಾಡದ ಉಪನಗರ ಠಾಣೆಗೆ ತಲೆ ನೋವಾಗಿರುವುದಂತೂ ಸತ್ಯ.