Posts Slider

Karnataka Voice

Latest Kannada News

‘ಎನ್ಕೌಂಟರ್ ಸ್ಪೆಷಲಿಸ್ಟ್’ ವಿಶ್ವನಾಥ ಸಜ್ಜನರಿಗೆ ಪದೋನ್ನತಿ…!

1 min read
Spread the love

ಹುಬ್ಬಳ್ಳಿ: ಎನ್ಕೌಂಟರ್ ಸ್ಪೇಷಲಿಸ್ಟ್ ಎಂದೇ ದೇಶವ್ಯಾಪಿ ಹೆಸರುಗಳಿಸಿರುವ ಕನ್ನಡಿಗ ವಿಶ್ವನಾಥ ಸಜ್ಜನರ ಅವರಿಗೆ ತೆಲಂಗಾಣ ರಾಜ್ಯ ಪೊಲೀಸ್ ಇಲಾಖೆ ಪದೋನ್ನತಿ ನೀಡಿದ್ದು, ಇನ್ನು ಮುಂದೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ.

ಹುಬ್ಬಳ್ಳಿಯ ವಿಶ್ವನಾಥ ಸಜ್ಜನರ ಅವರಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ಅವರು ನೂತನ ಎಡಿಜಿಪಿಯವರಿಗೆ ಪುಷ್ಪಗುಚ್ಚ ನೀಡಿ ಶುಭಾಶಯ ತಿಳಿಸಿದರು.

2019ರಲ್ಲಿ ಹೈದರಾಬಾದ್ ಪಶು ವೈದ್ಯೆ ದಿಶಾ ಅತ್ಯಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಅಂದು ಪೊಲೀಸ್ ಆಯುಕ್ತರಾಗಿದ್ದ ವಿಶ್ವನಾಥ ಸಜ್ಜನರ ಎನ್ ಕೌಂಟರ್ ಮಾಡಿದ್ದರು.

ಅತ್ಯಾಚಾರ ಪ್ರಕರಣದ ವಿರುದ್ಧ ರೋಸಿ ಹೋಗಿದ್ದ ದೇಶದ ಜನತೆ ವಿಶ್ವನಾಥ ಸಜ್ಜನರ ನಡೆಸಿದ ಎನ್ ಕೌಂಟರ್ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿಶ್ವನಾಥ ಸಜ್ಜನರನ್ನ ಪ್ರಶಂಸಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.


Spread the love

Leave a Reply

Your email address will not be published. Required fields are marked *

You may have missed