ಅಮಾನತ್ತಾಗಿದ್ದ ACP ವಿಜಯಕುಮಾರ ತಳವಾರ “ಸ್ಥಳಕ್ಕೆ” CIDಯ ಉಮೇಶ ಚಿಕ್ಕಮಠ ನೇಮಕ…!!!

ಹುಬ್ಬಳ್ಳಿ ದಕ್ಷಿಣ ಉಪ ವಿಭಾಗಕ್ಕೆ ಎಸಿಪಿ; ಉಮೇಶ ಚಿಕ್ಕಮಠ ನೇಮಕ
ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆಯ ಪ್ರಕರಣದಲ್ಲಿ ಕರ್ತವ್ಯ ಲೋಪದಡಿಯಲ್ಲಿ ಅಮಾನತ್ತಾಗಿದ್ದ ದಕ್ಷಿಣ ಉಪ ವಿಭಾಗದ ಎಸಿಪಿ ವಿಜಯಕುಮಾರ ತಳವಾರ ಅವರ ಸ್ಥಳಕ್ಕೆ ಸರ್ಕಾರ ಉಮೇಶ ಚಿಕ್ಕಮಠ ಅವರನ್ನು ನೇಮಕ ಮಾಡಿ ಆದೇಶ ಮಾಡಿದೆ.
ಸಿಐಡಿ ಯಲ್ಲಿ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಮೇಶ ಚಿಕ್ಕಮಠ ಅವರನ್ನು ದಕ್ಷಿಣ ಉಪ ವಿಭಾಗದ ಎಸಿಪಿ ಆಗಿ ಆದೇಶ ಮಾಡಿದೆ.
ಅಂಜಲಿ ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪದ ಎಸಗಿದ್ದಾರೆ ಎಂದು ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಮೂವರು ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತ್ತು ಮಾಡಿತ್ತು.