ಎಸಿಪಿ ಅನುಷಾ ಅವರಿದ್ದ ಕಾರು ಧಾರವಾಡದಲ್ಲಿ ಅಪಘಾತ….!

ಧಾರವಾಡ: ಪತಿಯೊಂದಿಗೆ ಕಾರಿನಲ್ಲಿ ಬರುತ್ತಿದ್ದ ಎಸಿಪಿಯವರ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಘಟನೆ ಧಾರವಾಡದ ಸಂಚಾರಿ ಠಾಣೆಯ ಬಳಿಯಲ್ಲಿ ರವಿವಾರ ಸಂಭವಿಸಿದೆ.
ನಗರದಲ್ಲಿಂದ ಪೊಲೀಸ್ ಗೆಸ್ಟ್ ಹೌಸ್ ನತ್ತ ಹೋಗುತ್ತಿರುವ ಸಮಯದಲ್ಲಿ ದುರ್ಘಟನೆ ನಡೆದಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ವಾಹನದಲ್ಲಿ ಎಸಿಪಿ ಹಾಗೂ ಅವರ ಪತಿಗೆ ಯಾವುದೇ ಥರದ ಗಾಯಗಳಾಗಿಲ್ಲ.

ಘಟನೆ ನಡೆಯುತ್ತಿದ್ದ ಹಾಗೇ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನ ನಡೆಸಿದರಾದರೂ, ಪ್ರಕರಣವನ್ನ ದಾಖಲಿಸಿಲು ಎರಡು ಕಡೆಯವರು ಮುಂದೆ ಬಂದಿಲ್ಲ.
ಸ್ವತಃ ಎಸಿಪಿಯವರೇ ತಮ್ಮ ಕಾರಿಗೆ ಡಿಕ್ಕಿ ಹೊಡೆದರೂ ಪ್ರಕರಣ ದಾಖಲು ಮಾಡದೇ ಇರುವುದು ಪೊಲೀಸರಲ್ಲಿಯೇ ಅಚ್ಚರಿ ಮೂಡಿಸಿದೆ. ಜಖಂಗೊಂಡಿರುವ ಕಾರನ್ನ ದುರಸ್ತಿಗಾಗಿ ಗ್ಯಾರೇಜಿಗೆ ಕಳಿಸಲಾಗಿದ್ದು, ಅದರ ಖರ್ಚನ್ನ ಡಿಕ್ಕಿ ಹೊಡೆದ ಕಾರಿನ ಮಾಲೀಕ ಕೊಡಲು ಒಪ್ಪಿಕೊಂಡಿದ್ದಾನೆಂದು ಹೇಳಲಾಗಿದೆ.