Posts Slider

Karnataka Voice

Latest Kannada News

ಹುಬ್ಬಳ್ಳಿ ಜೈಲಿಂದ “ಕೊಲೆ ಆರೋಪದ” ಖೈದಿ ಪರಾರಿ…

1 min read
Spread the love

ಹುಬ್ಬಳ್ಳಿ: ನಗರದ ಕಾರಾಗೃಹದಿಂದ ಕೊಲೆ ಆರೋಪದಲ್ಲಿನ ವಿಚಾರಣಾಧೀನ ಖೈದಿಯೋರ್ವ ಪರಾರಿಯಾದ ಘಟನೆ ನಡೆದಿದ್ದು, ಹುಡುಕಾಟಕ್ಕಾಗಿ ಪೊಲೀಸರು ಪರದಾಡುವಂತಾಗಿದೆ.

ಹುಬ್ಬಳ್ಳಿಯ ಆನಂದನಗರದ ವಿಜಯಯಾನಂದ ರೇಣುಕಾಪ್ರಸಾದ ನರೇಗಲ್ ಎಂಬಾತನೇ ಪರಾರಿಯಾಗಿರುವ ಖೈದಿಯಾಗಿದ್ದಾನೆ. ಕುಂದಗೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2014ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ.

ಇಂದು ಸಮಯ ಸಾಧಿಸಿ ವಿಜಯ ಪರಾರಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಅಶೋಕನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಲಾಗಿದೆ.


Spread the love

Leave a Reply

Your email address will not be published. Required fields are marked *