Posts Slider

Karnataka Voice

Latest Kannada News

ಕೇಂದ್ರ ಸಚಿವರ ‘ಪಿಎ’ ಕೂಡಾ ಸಾವು

1 min read
Spread the love

ಕಾರವಾರ : ಕೇಂದ್ರ ಆಯುಷ್ ಇಲಾಖೆ‌ ಸಚಿವ ಶ್ರೀ ಪಾದ ನಾಯ್ಕ‌ ಅವರ ಕಾರು ಪಲ್ಟಿಯಾಗಿ ಸಚಿವರ ಪತ್ನಿ ಸಾವನ್ನಪ್ಪಿದ್ದು, ಸಚಿವರ ಆಪ್ತ ಕಾರ್ಯದರ್ಶಿ ಕೂಡಾ ಮಾರ್ಗ ಮಧ್ಯದಲ್ಲಿ ಸಾವಿಗೀಡಾಗಿದ್ದಾರೆ.

ಸಚಿವ ಶ್ರೀಪಾದ ನಾಯಕ ಗಂಭೀರವಾಗಿ ಗಾಯಗೊಂಡಿದ್ದು ಘಟನೆ ತಾಲೂಕಿನ ಹೊಸಕಂಬಿ‌ ಹೆದ್ದಾರಿಯಲ್ಲಿ ನಡೆದಿದೆ. ಸಚಿವರು ಕುಟುಂಬಸ್ಥರ ಜೊತೆ ಯಲ್ಲಾಪುರ ಚಂದಗುಳಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಗೋಕರ್ಣದ  ಮಹಾಬಲೇಶ್ವರ ದೇಗುಲಕ್ಕೆ ತೆರಳುತ್ತಿದ್ದ ವೇಳೆ‌ ಕಾರು ಪಲ್ಟಿಯಾಗಿದ್ದು. ಸಚಿವರ ಪತ್ನಿ ಸ್ಥಳದಲ್ಲೇ‌ ಸಾವನ್ನಪ್ಪಿದ್ದರು. ಸಚಿವ ಆಪ್ತ ಸಹಾಯಕ ಕೂಡಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಸಾವಿಗೀಡಾಗಿದ್ದಾರೆ. ಇನ್ನೂ ಗಂಭೀರವಾಗಿ ಗಾಯಗೊಂಡಿರು ಶ್ರೀಪಾದ ನಾಯ್ಕ ಹಾಗೂ ಇನ್ನೂಳಿದ ಮೂವರನ್ನ ಅಂಕೋಲಾ ಸರಕಾರಿ‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಚಿವರ ಆಪ್ತ ಕಾರ್ಯದರ್ಶಿಯನ್ನ ದೀಪಕ ರಾಮದಾದ ಗೂಮೆ ಎಂದು ಗುರುತಿಸಲಾಗಿದೆ.


Spread the love

Leave a Reply

Your email address will not be published. Required fields are marked *