Posts Slider

Karnataka Voice

Latest Kannada News

ವೆಂಕಟಾಪುರದ ಬಳಿ ಬೈಕಿಗೆ ಕಾರು ಡಿಕ್ಕಿ: ಇಬ್ಬರು ಮಹಿಳೆಯರು ಸೇರಿ ಮೂವರ ದುರ್ಮರಣ…

Spread the love

ಭೀಕರ ರಸ್ತೆ ಅಪಘಾತ 3 ಮಂದಿ ಸ್ಥಳದಲ್ಲೇ ಸಾವು

ಧಾರವಾಡ: ವೇಗವಾಗಿ ಬಂದ ಕಾರ್ ಬೈಕಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ವೆಂಕಟಾಪೂರ ರಾಷ್ಟ್ರೀಯ ಹೆದ್ದಾರಿ ‌ಸಮೀಪ‌ ನಡೆದಿದೆ.

ಘಟನೆಯಲ್ಲಿ ಬೈಕನಲ್ಲಿದ್ದ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಪಘಾತವಾದ ನಂತರ ಕಾರ್ ಬಿಟ್ಟು ವಾಹನ‌ ಚಾಲಕರು ಪರಾರಿಯಾಗಿದ್ದಾರೆ.

ಮೃತರು ಧಾರವಾಡ ತಾಲೂಕಿನ ಬೋಗೂರು ಗ್ರಾಮದ
ಸುಶಿಲವ್ವ ಹರಿಜನ, ಕಲ್ಲವ್ವ ಹರಿಜನ, ರಾಜು ಎನ್ನುವರಾಗಿದ್ದಾರೆ.

ರಾಷ್ಟ್ರೀಯ ‌ಹೆದ್ದಾರಿ 4 ರಲ್ಲಿ ಘಟನೆ ನಡೆದಿದ್ದು, ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *