ನವಲಗುಂದ: ಮಗು ತೋರಿಸಲು ಬಂದಿದ್ದ ತಂದೆ-ತಾಯಿ ದುರ್ಮರಣ…

ನವಲಗುಂದ: ತಮ್ಮ ಮಗು ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಪಟ್ಟಣದ ಗುಡಿ ಡಾಕ್ಟರ್ ಹತ್ತಿರ ತೋರಿಸಲು ಬಂದಿದ್ದ ದಂಪತಿಗಳ ಬೈಕಿಗೆ ಮರಳು ತುಂಬಿದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ, ದಂಪತಿಗಳು ಸಾವಿಗೀಡಾದ ಘಟನೆ ನಡೆದಿದೆ.

ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದ ಆನಂದ ಮತ್ತು ಸುಷ್ಮಾ ತಮ್ಮ ಮಗುವನ್ನ ಕರೆದುಕೊಂಡು ನವಲಗುಂದ ಪಟ್ಟಣಕ್ಕೆ ಬರುವಾಗ, ಟಿಪ್ಪರ್ ಎರಡು ಬೈಕಿಗೆ ಡಿಕ್ಕಿ ಹೊಡೆದಿದ್ದು, ಒಂದು ಬೈಕಿನಲ್ಲಿದ್ದ ದಂಪತಿಗಳು ಸಾವಿಗೀಡಾದರೇ, ಮಗು ಪವಾಡಸದೃಶ ರೀತಿಯಲ್ಲಿ ಪಾರಾಗಿದೆ. ಇನ್ನೊಂದು ಬೈಕಿನಲ್ಲಿದ್ದ ಮಂಜುನಾಥ ಗಾಣಗೇರ ಎಂಬಾತನಿಗೆ ಗಾಯವಾಗಿದ್ದು, ಆತನನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಘಟನಾ ಸ್ಥಳಕ್ಕೆ ನವಲಗುಂದ ಠಾಣೆ ಪಿಎಸ್ಐ ಕಲ್ಮೇಶ ಬೆನ್ನೂರ ದೌಡಾಯಿಸಿದ್ದು, ಪರಿಶೀಲನೆಯನ್ನ ನಡೆಸುತ್ತಿದ್ದಾರೆ. ಅಪಘಾತ ಪಡಿಸಿದ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆಂದು ಗೊತ್ತಾಗಿದೆ.