Karnataka Voice

Latest Kannada News

ರಾಯನಾಳ ಬಳಿ ಸರಣಿ ಅಪಘಾತ: ಪೊಲೀಸ್ ಅಧಿಕಾರಿಗಳು ಪ್ರಾಣಾಪಾಯದಿಂದ ಪಾರು…!

Spread the love

ಹುಬ್ಬಳ್ಳಿ: ತಾಲೂಕಿನ ರಾಯನಾಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಸರಣಿ ಅಪಘಾತದಲ್ಲಿ ಪೊಲೀಸ್ ವಾಹನವೂ ಸೇರಿದಂತೆ ಮೂರು ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ತೀವ್ರವಾಗಿ ಗಾಯಗೊಂಡಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

ಇಂದು ನಡು ಮಧ್ಯಾಹ್ನವೇ ಘಟನೆ ನಡೆದಿದ್ದು, ಬೆಳಗಾವಿಗೆ ಹೋಗುತ್ತಿದ್ದ ಡಿಸಿಆರ್ ಬಿ ವಾಹನದ ಮುಂದೆ ಲಾರಿಯೊಂದು ಹೊರಟಿತ್ತು. ಎದುರಿಗೆ ಬಂದ ಕ್ಯಾಂಟರ್ ವಾಹನವೊಂದು ಡಿಕ್ಕಿ ಹೊಡೆಯತ್ತೆ ಎಂದುಕೊಂಡು, ಪೊಲೀಸ್ ವಾಹನದ ಮುಂದಿನ ಲಾರಿ ಬ್ರೇಕ್ ಹಾಕಿದ್ದು, ಇದರಿಂದ ನಿಯಂತ್ರಣ ತಪ್ಪಿ ಪೊಲೀಸ್ ವಾಹನ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲ, ಎದುರಿಗೆ ಬರುತ್ತಿದ್ದ ಕ್ಯಾಂಟರ ವಾಹನವೂ ಡಿಕ್ಕಿ ಹೊಡೆಯುವ ಭಯದಲ್ಲಿ ಎಡಗಡೆ ತೆಗೆದುಕೊಂಡು, ನಿಯಂತ್ರಣ ತಪ್ಪಿ ಗಿಡಗಂಟೆಗಳಿಗೆ ಹೋಗಿ ಡಿಕ್ಕಿ ಹೊಡೆದಿದ್ದು, ವಾಹನದಲ್ಲಿದ್ದ ಓರ್ವ ತೀವ್ರವಾಗಿ ಗಾಯಗೊಂಡು, ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದ.

ಪೊಲೀಸ್ ವಾಹನದಲ್ಲಿದ್ದ ಓರ್ವ ಇನ್ಸಪೆಕ್ಟರ್ ಹಾಗೂ ಹವಾಲ್ದಾರೋರ್ವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಬೆಳಗಾವಿಗೆ ಹೋಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ಹಾಗೇ ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಸ್ತೆಯಲ್ಲಿ ಬಿದ್ದು ನರಳುತ್ತಿದ್ದವನಿಗೆ ಕಿಮ್ಸನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


Spread the love

Leave a Reply

Your email address will not be published. Required fields are marked *