ಕಾಂಗ್ರೆಸ್ ಹೋರಾಟಕ್ಕೆ ಬಂದ ರೈತ “ಹುಬ್ಬಳ್ಳಿಯಲ್ಲಿ” ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ…

ಹುಬ್ಬಳ್ಳಿ: ಮಹದಾಯಿ ವಿಷಯವಾಗಿ ನಡೆಯುತ್ತಿರುವ ಕಾಂಗ್ರೆಸ್ ಹೋರಾಟದಲ್ಲಿ ಭಾಗಿಯಾಗಲು ಬಂದಿದ್ದ ರೈತರ ಮೇಲೆ ಬಸ್ ಹರಿದು, ಓರ್ವ ಸಾವಾಗಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಲ್ಯಾಮಿಂಗ್ಟನ್ ರಸ್ತೆಯಲ್ಲಿ ನಡೆದಿದೆ.
ಹುಬ್ಬಳ್ಳಿ ಗದಗ ಬಸ್ ವೇಗವಾಗಿ ಬಂದು ನಿಯಂತ್ರಣ ತಪ್ಪಿ ಪಾದಚಾರಿ ರೈತರಿಗೆ ಡಿಕ್ಕಿ ಹೊಡೆದಿದೆ. ನಿಂಗಪ್ಪ ಮಾಣೇಣ್ಣನವರ ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ.