Posts Slider

Karnataka Voice

Latest Kannada News

ಗರಗ ಠಾಣೆ ಪೊಲೀಸ್ ದುರ್ಮರಣ: ಪರಾರಿಯಾಗಿದ್ದ ಟ್ಯಾಂಕರ್ ಪತ್ತೆ….

1 min read
Spread the love

ಧಾರವಾಡ: ಛಬ್ಬಿ ಗ್ರಾಮದಲ್ಲಿನ ಗಣೇಶ ಬಂದೋಬಸ್ತ್ ಮುಗಿಸಿಕೊಂಡು ಬರುತ್ತಿದ್ದ ಸಮಯದಲ್ಲಿ ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಟ್ಯಾಂಕರ್ ವಾಹನವನ್ನ ವಶಕ್ಕೆ ಪಡೆಯುವಲ್ಲಿ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಗರಗ ಠಾಣೆಯ ಹುಚ್ಚೇಶ ಮಲ್ಲಣ್ಣನವರ ಸಾವಿಗೀಡಾಗಿದ್ದರು. ಜೊತೆಗಿದ್ದ ಮಹಿಳಾ ಪೇದೆ ಲಕ್ಷ್ಮೀ ಅರಬಾವಿ ಗಂಭೀರವಾಗಿ ಗಾಯಗೊಂಡಿದ್ದರು.

20 ಸೆಪ್ಟೆಂಬರ್ ನಲ್ಲಿ ಘಟನೆ ನಡೆದಿದ್ದರೂ ಅಪಘಾತ ಪಡಿಸಿ ಪರಾರಿಯಾಗಿದ್ದ ವಾಹನದ ಮಾಹಿತಿ ಸಿಕ್ಕಿರಲಿಲ್ಲ. ಆಸಕ್ತಿಯಿಂದ ಗ್ರಾಮೀಣ ಠಾಣೆಯ ಪೊಲೀಸರು ಕರ್ತವ್ಯ ನಿರ್ವಹಿಸಿದ್ದರಿಂದ ವಾಹನ ಪತ್ತೆಯಾಗಿದೆ.

ಪ್ರಕರಣವನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿ ಹಾಗೂ ಪೊಲೀಸರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಅಭಿನಂದಿಸಿದ್ಸಾರೆ.


Spread the love

Leave a Reply

Your email address will not be published. Required fields are marked *