ಬೈಕಿಗೆ ಕಾರು ಡಿಕ್ಕಿ: ಯುವಕನ ಸ್ಥಿತಿ ಗಂಭೀರ- ನವಲೂರು ಬಳಿ ರಸ್ತೆ ತಡೆ..!
1 min readಧಾರವಾಡ: ನವಲೂರು ಮೂಲದ ಯುವಕನ ಬೈಕಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ಸ್ಥಿತಿ ಚಿಂತಾಜನಕವಾಗಿದ್ದು, ಗ್ರಾಮಸ್ಥರು ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶವ್ಯಕ್ತಪಡಿಸಿದ್ರು.
ನವಲೂರಿನ ವಿನಾಯಕನಗರದ ತಿಪ್ಪಣ್ಣ ಈಶ್ವರಪ್ಪ ಬಳ್ಳೂರ ಎಂಬಾತನೇ ಬೈಕಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಕಾರು ಡಿಕ್ಕಿ ಹೊಡೆದಿದೆ. ವೇಗವಾಗಿ ಕಾರು ಡಿಕ್ಕಿಯಾದ ಪರಿಣಾಮ, ಯುವಕನ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಧಾರವಾಡ ಸಂಚಾರಿ ಠಾಣೆಯ ಪೊಲೀಸರು, ರಸ್ತೆ ಸಂಚಾರ ಬಂದ್ ಮಾಡಿದ್ದನ್ನ ಜನರಿಗೆ ತಿಳುವಳಿಕೆ ನೀಡಿ, ಸಂಚಾರವನ್ನ ಸುಗಮಗೊಳಿಸಿದ್ದು, ಗಾಯಾಳುವಿರುವ ಆಸ್ಪತ್ರೆಗೆ ತೆರಳಿ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.
ಘಟನಾ ಸ್ಥಳದ ಬಗ್ಗೆಯೂ ಮಾಹಿತಿಯನ್ನ ಪಡೆದಿರುವ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.