Posts Slider

Karnataka Voice

Latest Kannada News

‘ಮದರಂಗಿ ರಂಗಾರುವ’ ಮುನ್ನವೇ ಇನ್ನಿಲ್ಲವಾದ ಮದುಮಗಳು-ಮದುಮಗ ಬಚಾವ್…!

Spread the love

ವಿಜಯಪುರ: ಟೆಂಫೋ ಹಾಗೂ ಕ್ರೂಸರ್ ವಾಹನಗಳ ಮಧ್ಯೆ‌ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮದುಮಗಳು ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬಿ.ಕೆ. ಯರಗಲ್ ಬಳಿ ನಡೆದಿದೆ.

ರಾಣಿ ಗಣೇಶ ಚವ್ಹಾಣ ಮೃತ ಮದುಮಗಳಾಗಿದ್ದಾಳೆ. ಮದುವೆ ಮಾಡಿಕೊಳ್ಳಲು ಹೊರಟ ಸಮಯದಲ್ಲಿಯೇ ಘಟನೆ ನಡೆದಿದ್ದು, ಮದುಮಗಳು ರಸ್ತೆಯಲ್ಲಿ ಸಾವಿಗೀಡಾದ ದುರ್ಘಟನೆ ನಡೆದಿದೆ.

ಘಟನೆಯಲ್ಲಿ ಮದುಮಗ ಗಣೇಶ ಚವ್ಹಾಣ ಸೇರಿದಂತೆ ಏಳು ಜನರಿಗೆ ಗಂಭೀರ ಗಾಯಗಳಾಗಿದ್ದು, ಎಲ್ಲರನ್ನೂ ಸಿಂದಗಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನು ಮದುವೆ ನಂತರ ಶಂಕರವಾಡಿಯಿಂದ ಕೊಕಟನೂರ ದೇವಸ್ಥಾನಕ್ಕೆ ಹೋಗುವ ವೇಳೆಯಲ್ಲಿ ಟೆಂಫೋ ಚಾಲಕನ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಸಿಂದಗಿ ಪೊಲೀಸ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


Spread the love

Leave a Reply

Your email address will not be published. Required fields are marked *