ಬೈಕಿಗೆ ಬಸ್ ಡಿಕ್ಕಿ-“ಹವಾಲ್ದಾರ” ದುರ್ಮರಣ..

ಮಂಡ್ಯ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ, ಕರ್ತವ್ಯಕ್ಕೆ ಹಾಜರಾಗಿ ಮರಳುತ್ತಿದ್ದ ಸಮಯದಲ್ಲಿ ಹವಾಲ್ದಾರರೋರ್ವರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಮಂಡ್ಯ ತಾಲೂಕಿನ ಬಸರಾಳು ಗ್ರಾಮದ ಬಳಿ ಸಂಭವಿಸಿದೆ.

ನಾಗಮಂಗಲ ಗ್ರಾಮಾಂತರ ಠಾಣೆಯ ಹವಾಲ್ದಾರ ವೆಂಕಟೇಶ ಎಂಬುವವರೇ ಸಾವಿಗೀಡಾಗಿದ್ದು, ಬಸ್ಸಿನ ಡಿಕ್ಕಿಯಿಂದ ತೀವ್ರವಾದ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಚುಂಚನಗಿರಿಯ ಜಾತ್ರೆಗಾಗಿ ಕರ್ತವ್ಯಕ್ಕೆ ಹೋಗಿದ್ದ ಹವಾಲ್ದಾರ ವೆಂಕಟೇಶ ಅವರು, ಬೆಳಿಗ್ಗೆ ಮಂಡ್ಯಕ್ಕೆ ಬರುವಾಗ ಘಟನೆ ನಡೆದಿದೆ. ರಾತ್ರಿಪೂರ್ತಿ ಕರ್ತವ್ಯ ನಿರ್ವಹಿಸಿ ಬರುವಾಗ ವೇಗವಾಗಿ ಬಂದ ಬಸ್ಸ್ ಡಿಕ್ಕಿ ಹೊಡೆದಿದೆ. 50 ವರ್ಷದ ವೆಂಕಟೇಶ ಇನ್ನಿಲ್ಲವಾಗಿದ್ದಾರೆ.

ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು, ಡಿಕ್ಕಿ ಹೊಡೆದ ಬಸ್ಸನ್ನ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.