Posts Slider

Karnataka Voice

Latest Kannada News

ಹುಬ್ಬಳ್ಳಿ ಮೂಲಕ ಹೊರಟಿದ್ದ ಟಿಟಿ ವಾಹನ ಗುಂಡೇನಹಳ್ಳಿ ಕ್ರಾಸ್ ಬಳಿ ಲಾರಿಗೆ ಡಿಕ್ಕಿ- 13 ಜನರ ದುರ್ಮರಣ…!!!

1 min read
Spread the love

ಹಾವೇರಿ: ಯಲ್ಲಮ್ಮ‌ ದೇವಿಯ ದರ್ಶನ ಪಡೆದು ತಮ್ಮೂರಿಗೆ ಹೊರಟಿದ್ದ ಟಿಟಿ ವಾಹನವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿ 13 ಜನ ದುರ್ಮರಣಕ್ಕೀಡಾದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಸಂಭವಿಸಿದೆ.

ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ  ನಿಂತಿದ್ದ ಲಾರಿಗೆ ಹಿಂದಿನಿಂದ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ವಾಹನ  ನಜ್ಜು ಗುಜ್ಜಾಗಿದ್ದು, ಮೃತದೇಹಗಳು ಸಿಲುಕಿಕೊಂಡಿದ್ದವು.

ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹೊರ ತೆಗೆದಿದ್ದು, ಬದುಕುಳಿದ ಇಬ್ಬರನ್ನ ಆಸ್ಪತ್ರೆಗೆ ರವಾನೆ‌ ಮಾಡಿದ್ದಾರೆ.

ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರೆಂದು ಗುರುತಿಸಲಾಗಿದೆ. ಬೆಳಗಾವಿ ಜಿಲ್ಲೆಯ ಯಲ್ಲಮ್ಮ ದೇವಸ್ಥಾನವ ಹಾಗೂ ಚಿಂಚಲಿ ಮಾಯಮ್ಮನ ದರ್ಶನಕ್ಕೆ ಹೋಗಿ ಮರಳಿ ಬರುವಾಗ ದುರ್ಘಟನೆ ನಡೆದಿದೆ.

ಮೃತರ ಮಾಹಿತಿ ಇಲ್ಲಿದೆ ನೋಡಿ..

1 ) ಪರಶುರಾಮ್ (45)

2) ಭಾಗ್ಯ (40)

3) ನಾಗೇಶ್ (50)

4) ವಿಶಾಲಾಕ್ಷಿ (50)

5) ಸುಭದ್ರಾ ಭಾಯಿ (65)

6) ಪುಣ್ಯ (50)

7) ಮಂಜುಳಾ ಭಾಯಿ (57)

8) ಆದರ್ಶ್ (23) ಡ್ರೈವರ್

9) ಮಾನಸಾ (24)

10) ರೂಪಾ (40)

11) ಮಂಜುಳಾ (50)

12) 4 ವರ್ಷದ ಮಗು ಹೆಸರು ಪತ್ತೆಯಾಗಬೇಕಿದೆ

13)  6 ವರ್ಷದ ಮಗು ಹೆಸರು ಪತ್ತೆ ಆಗಬೇಕಿದೆ


Spread the love

Leave a Reply

Your email address will not be published. Required fields are marked *