ವಿಜಯ ಕುಲಕರ್ಣಿ ಮೇಲೆ ಎಫ್ಐಆರ್- ಠಾಣೆಗೆ ತಿಳಿಸದೇ ಓಡಿ ಹೋದ ಪ್ರಕರಣ…!

ಧಾರವಾಡ: ಕುಮಾರೇಶ್ವರನಗರದ ಬಳಿ ನಡೆದ ಸರಣಿ ಅಪಘಾತದ ಬಗ್ಗೆ ಧಾರವಾಡ ಸಂಚಾರಿ ಠಾಣೆಯಲ್ಲಿ ಎಫ್ ಆರ್ ಐ ದಾಖಲಾಗಿದ್ದು, ಅದರಲ್ಲಿ ಸ್ಪಷ್ಟವಾಗಿ ನಮೂದು ಮಾಡಲಾಗಿದ್ದು, ವಿಜಯ ಕುಲಕರ್ಣಿಯವರು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದಾರೆಂದು ಹೇಳಲಾಗಿದೆ.

ಕರ್ನಾಟಕವಾಯ್ಸ್.ಕಾಂ ಸಂಚಾರಿ ಠಾಣೆಯಲ್ಲಿ ದಾಖಲಾದ ಪ್ರತಿ ಲಭ್ಯವಾಗಿದ್ದು, ಇಡೀ ಪ್ರಕರಣದ ಬಗ್ಗೆ ವಿವರವಾದ ಮಾಹಿತಿ ಲಭ್ಯವಾಗಿದೆ. ನಿನ್ನೆ ರಾತ್ರಿ ನಾನೇ ಪೊಲೀಸರಿಗೆ ಮಾಹಿತಿ ನೀಡಿದ್ದೆ ಎಂಬುದನ್ನ ಪೊಲೀಸರು ಅಲ್ಲಗಳೆದಿದ್ದು, ಘಟನೆಯ ಬಗ್ಗೆ ಮಾಹಿತಿ ಕೊಡದೇ ವಾಹನ ಬಿಟ್ಟು ಪರಾರಿಯಾಗಿದ್ದಾರೆಂದು ಎಫ್ ಐಆರ್ ನಲ್ಲಿದೆ.

ವಿಜಯ ಕುಲಕರ್ಣಿಯವರ ಮೇಲೆ IPC 1860 (U/s-279,337,338,304(A)); INDIAN MOTOR VEHICLES ACT, 1988 (U/s-134(A&B),187) ಪ್ರಕರಣ ದಾಖಲು ಮಾಡಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಸಂಚಾರಿ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.