Posts Slider

Karnataka Voice

Latest Kannada News

ಕುಡಿದ ಮತ್ತಿನಲ್ಲಿ ಬೈಕ್ ಚಾಲನೆ: ಪಾದಚಾರಿ, ಬೈಕ್ ಸವಾರ ಸ್ಥಿತಿ ಗಂಭೀರ

1 min read
Spread the love

ಧಾರವಾಡ: ಮದ್ಯ ಸೇವಿಸಿದ ಮತ್ತಿನಲ್ಲಿ ಬೈಕ್ ಚಲಾಯಿಸುತ್ತಿದ್ದ ಸಮಯದಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಪಾದಚಾರಿಯೂ ಸೇರಿದಂತೆ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಮತ್ತೋಬ್ಬ ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ಧಾರವಾಡದ ಲಕ್ಷ್ಮೀ ಚಿತ್ರಮಂದಿರ ಬಳಿ ಸಂಭವಿಸಿದೆ.

ಧಾರವಾಡ ಗಾಂಧಿನಗರ ಶಾಂಭವಿ ಕಾಲೋನಿ ನಿವಾಸಿಯಾದ ಮಂಜುನಾಥ ಮಹೇಶ ಮಣ್ಣೂರ ಹಾಗೂ ಹಿಂಬದಿ ಸವಾರ ಧಾರವಾಡ ದಾನೇಶ್ವರಿ ನಗರದ ನಿವಾಸಿ ಮಂಜುನಾಥ ಮಾನೆ ಕುಡಿತ ಮತ್ತಿನಲ್ಲಿ ಬೈಕ್ ಚಲಾಯಿಸುತ್ತ ಬರುತ್ತಿದ್ದಾಗ, ಎದುರಿಗೆ ಬಂದ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾರೆ.

ಬೈಕ್ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಧಾರವಾಡ ಠಾಕೂರ ಪೇಢಾದಲ್ಲಿ ಕಾರ್ಯನಿರ್ವಹಿಸುವ ಮುಖೇಶಪ್ರಸಾದ ತಿವಾರಿಗೆ ಗಂಭೀರ ಗಾಯಗಳಾಗಿವೆ. ಇದರ ಜೊತೆಗೆ ಬೈಕ್ ಸವಾರ ಮಂಜುನಾಥ ಕೊಣ್ಣೂರನ ಸ್ಥಿತಿ ಅಯೋಮಯವಾಗಿದೆ.

ಮೂವರನ್ನ ಖಾಸಗಿ ಆಸ್ಪತ್ರೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗಿದ್ದು, ಇಬ್ಬರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *

You may have missed