ಧಾರವಾಡದಲ್ಲಿ “ಅಪ್ಪಾಚ್ಚಿ ಅಪ್ಪಚ್ಚಿ” ಇಬ್ಬರು ಯುವಕರ ದುರ್ಮರಣ…

ಧಾರವಾಡ: ವೇಗವಾಗಿ ಬೈಕ್ ಚಲಾಯಿಸುತ್ತಿದ್ದ ಯುವಕರು ಮೊದಲು ಕಾರಿಗೆ ಡಿಕ್ಕಿ ಹೊಡೆದು, ಅವರಿಂದ ತಪ್ಪಿಸಿಕೊಳ್ಳಲು ಹೋಗಿ ಡಿವೈಡರ್ ಗೆ ಬಡಿದು ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಧಾರವಾಡ ಉಪನಗರ ಪೊಲೀಸ್ ಠಾಣೆ ಸಮೀಪದಲ್ಲಿ ಈಗಷ್ಟೇ ನಡೆದಿದೆ.

ಘಟನೆಯಲ್ಲಿ ಸೈದಾಪುರದ 19 ವರ್ಷದ ಮಜ್ಜೀನ್ ಅಜ್ಜಮ್ಮನವರ ಹಾಗೂ ಜನ್ನತನಗರದ 17 ವರ್ಷದ ಪರ್ಹಾನ್ ಸಂಗ್ರೇಶಕೊಪ್ಪ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಅಪ್ಪಾಚ್ಚಿ ಬೈಕಿನಲ್ಲಿ ವೇಗವಾಗಿ ಹೋಗುತ್ತಿದ್ದಾಗಲೇ ದುರ್ಘಟನೆ ನಡೆದಿದ್ದು, ಡಿವೈಡರ್ ಬಲವಾಗಿ ಪೆಟ್ಟು ಬಿದ್ದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.