ಧಾರವಾಡದ ಸಂಪಿಗೆನಗರ, ಹುಬ್ಬಳ್ಳಿಯ ತಾರಿಹಾಳದ ಬಳಿ ಭೀಕರ ಅಪಘಾತ- ನಾಲ್ವರ ದುರ್ಮರಣ, ಮೂವರ ಸ್ಥಿತಿ ಚಿಂತಾಜನಕ…!!!

ಧಾರವಾಡ: ಸಂಪಿಗೆನಗರದ ಬಳಿ ಲಾರಿಯೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ನಜ್ಜುಗುಜ್ಜಾಗಿ, ಅದರಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾದ ಘಟನೆ ಬೆಳಗಿನ ಜಾವ ಸಂಭವಿಸಿದೆ.
ವೀಡಿಯೋ….
ಮೃತರನ್ನ ಕೆಲಗೇರಿಯ 35ವರ್ಷದ ಆಟೋ ಚಾಲಕ ಮಾರುತಿ ದುರ್ಗಪ್ಪ ಹಂಚಿನಮನಿ ಹಾಗೂ 48 ವರ್ಷದ ಮರೆವ್ವ ನಿಂಗಪ್ಪ ಹಂಚಿನಮನಿ ಸಾವಿಗೀಡಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಚಿಕಿತ್ಸೆಗಾಗಿ ಧಾರವಾಡ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಿರುವ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ಮತ್ತೊಂದು ಘಟನೆಯು ಹುಬ್ಬಳ್ಳಿಯ ತಾರಿಹಾಳ ಕ್ರಾಸ್ ಬಳಿಯ ಬೈಪಾಸ್ನಲ್ಲಿ ಸಂಭವಿಸಿದ್ದು, ಬೈಕಿನಲ್ಲಿದ್ದ ಇಬ್ವರು ಸಾವಿಗೀಡಾಗಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಹುಬ್ಬಳ್ಳಿ ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.