Posts Slider

Karnataka Voice

Latest Kannada News

ಧಾರವಾಡ: ಆರು ಜನರನ್ನ ಕಳೆದುಕೊಂಡ ಕುಟುಂಬದವರ ಮುಗಿಲು ಮುಟ್ಟಿದ ಆಕ್ರಂದನ…!!!

1 min read
Spread the love

ಭೀಕರ ಅಪಘಾತ; ಧಾರವಾಡ ಮೂಲದ

ಕುಟುಂಬ ಸದಸ್ಯರ ಸಾವು

ಧಾರವಾಡ: ಬೆಳಗಾವಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಧಾರವಾಡ ಮೂಲದ ಆರು ಜನ ಸಾವನ್ನಪ್ಪಿದ್ದು, ಕುಟುಂಬದ ಸದಸ್ಯರು ಶೋಕದಲ್ಲಿ ಮುಳುಗಿದ್ದಾರೆ. ಧಾರವಾಡ ಭೂಸಪ್ಪ ಚೌಕ ಬಳಿಯ ಮೃತರ ನಿವಾಸದ ಬಳಿ ಜನರ ರೋಧನೆ ಮುಗಿಲು ಮುಟ್ಟಿದೆ.

ವೀಡಿಯೋ…

ಮದುವೆ ಮುಗಿಸಿಕೊಂಡು ಮರಳಿ ಮನೆಗೆ ಬರುವಾಗ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಮರಕ್ಕೆ ಗುದ್ದಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಧಾರವಾಡ ಮೂಲದ ಕಾರು ಚಾಲಕ ಶಾರುಕ್ ಪೆಂಡಾರಿ (30), ಇಕ್ಬಾಲ್ ಜಮಾದಾರ್(50), ಸಾನಿಯಾ ಲಂಗೋಟಿ(37), ಉಮ್ರಾಬೇಗಂ ಲಂಗೋಟಿ(17), ಶಬಾನಾಭಾನು ಲಂಗೋಟಿ(37), ಪರಾನ್ ಲಂಗೋಟಿ(13) ಸಾವನ್ನಪ್ಪಿದ್ದಾರೆ.

ಧಾರವಾಡ ಭೂಸಪ್ಪ ಚೌಕ ಬಳಿಯ ಮೃತರ ನಿವಾಸದ ಬಳಿ ಜನರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಕಣ್ಣೀರು ಹಾಕುತ್ತಲೇ ಕುಟುಂಬ ಸದಸ್ಯರು ರೋಧಿಸುತ್ತಿರುವ ದೃಶ್ಯ ಕಂಡುಬಂದವು.


Spread the love

Leave a Reply

Your email address will not be published. Required fields are marked *