Posts Slider

Karnataka Voice

Latest Kannada News

“0007 ಬಾಂಡ್” ಕಾರು ಅಪಘಾತ-ಧಾರವಾಡದಲ್ಲಿ ಇಬ್ಬರ ಸಾವು…

Spread the love

ಧಾರವಾಡ: ಬೆಳಗಾವಿ ರಸ್ತೆಯ ಕುಮಾರೇಶ್ವರ ನಗರದ ಬಳಿ ನಿಯಂತ್ರಣ ತಪ್ಪಿದ ಕೀಯಾ ಕಾರೊಂದು ಮೂರು ಬೈಕುಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೂವರ ಪೈಕಿ ಇಬ್ಬರು ಸಾವಿಗೀಡಾಗಿದ್ದಾರೆ.

ಬೆಳಗಾವಿಯಿಂದ ಬರುತ್ತಿದ್ದ ಕಾರು ಮಾಜಿ ಸಚಿವ ವಿನಯ ಕುಲಕರ್ಣಿಯವರ ಸಹೋದರ ವಿಜಯ ಕುಲಕರ್ಣಿಯವರದ್ದೆಂದು ಹೇಳಲಾಗಿದ್ದು, ಅಪಘಾತದಲ್ಲಿ ಹಲವು ಬೈಕುಗಳು ಜಖಂಗೊಂಡಿದ್ದು, ಮೂವರಿಗೆ ತೀವ್ರ ಥರದ ಗಾಯಗಾಗಿದ್ದವು. ಆಸ್ಪತ್ರೆಗೆ ದಾಖಲು ಮಾಡಿದ ಕೆಲವೇ ನಿಮಿಷಗಳಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.

ಘಟನೆಯಲ್ಲಿ ಸಾವಿಗೀಡಾದವರನ್ನ ದೇವರಹುಬ್ಬಳ್ಳಿಯ ಚರಣ ಮೌನೇಶ್ವರ ನಾಯಕ ಹಾಗೂ ಯತ್ತಿನಗುಡ್ಡ ಶೇಕು ಬಸಪ್ಪ ಉದ್ದಾರ ಎಂದು ಗುರುತಿಸಲಾಗಿದ್ದು, ಸಾಧನಕೇರಿಯ ಅರವಿಂದ ಮಲಗೌಡ ಪಾಟೀಲ ಎಂಬುವವರು ಗಾಯಗೊಂಡು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವೇಗವಾಗಿ ಬರುತ್ತಿದ್ದ ಕೀಯಾ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರು ಯಾರೂ ಎಂಬುದು ಪತ್ತೆಯಾಗಿಲ್ಲ. ಕಾರಿನಲ್ಲಿ ವಿಜಯ ಕುಲಕರ್ಣಿಯವರೇ ಇದ್ದರಾ ಅಥವಾ ಇಲ್ಲವೋ ಎಂಬುದು ಕೂಡಾ ಗೊತ್ತಾಗಿಲ್ಲ. ರಸ್ತೆಯುದ್ದಕ್ಕೂ ಬಿದ್ದ ಮೂವರು ಗಾಯಾಳುಗಳನ್ನ ಪೊಲೀಸರು ಚಿಕಿತ್ಸೆಗಾಗಿ ಧಾರವಾಡದ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಕೆಎ-48 ಪಿ-007 ಕೀಯಾ ಕಾರಿಂದ ಅಪಘಾತ ಸಂಭವಿಸಿದೆ. ಕಾರು ಕೂಡಾ ಜಖಂಗೊಂಡಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *