ಧಾರವಾಡ: ಭೀಕರ ಅಪಘಾತ- ಪೊಲೀಸ್ ಸಾವು, ಮಹಿಳಾ ಪೊಲೀಸ್ಗೆ ಗಂಭೀರ ಗಾಯ…

ಧಾರವಾಡ: ಛಬ್ಬಿ ಗಣೇಶನ ಬಂದೋಬಸ್ತ್ ಮುಗಿಸಿ ಮರಳಿ ಬರುತ್ತಿದ್ದ ಬೈಕಿಗೆ ಅಪರಿಚಿತ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ರಮ್ಯ ರೆಸಿಡೆನ್ಸಿ ಬಳಿ ನಡೆದಿದ್ದು, ಘಟನೆಯಲ್ಲಿ ಪೊಲೀಸ್ ಸ್ಥಳದಲ್ಲಿ ಸಾವಿಗೀಡಾಗಿದ್ದಾನೆ.
ಬೈಕಿನ ಹಿಂಬದಿ ಕುಳಿತಿದ್ದ ಲಕ್ಷ್ಮೀ ಎಂಬ ಮಹಿಳಾ ಪೊಲೀಸ್ಗೆ ಗಂಭೀರ ಗಾಯಗಳಾಗಿದ್ದು, ಮೃತ ಪೊಲೀಸ್ನನ್ನ ಹುಚ್ಚೇಶ ಮಲ್ಲನಗೌಡ ಹಿರೇಗೌಡರ ಎಂದು ಗುರುತಿಸಲಾಗಿದೆ.
ಗರಗ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರನ್ನ ಬಂದೋಬಸ್ತ್ಗಾಗಿ ಛಬ್ಬಿಗೆ ಕಳಿಸಲಾಗಿತ್ತು. ಮರಳಿ ಬರುವಾಗ ದುರ್ಘಟನೆ ನಡೆದಿದ್ದು, ಪೊಲೀಸ್ನ ಮೃತ ದೇಹವೂ ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲುಯಾಗಿದೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಾರಿಯಾಗಿರುವ ವಾಹನದ ಮಾಹಿತಿ ಪಡೆಯುತ್ತಿದ್ದಾರೆ.