ಧಾರವಾಡ: ಸೋಜಿಗದ ಘಟನೆ, ರಾತ್ರಿ ಜೊತೆಗಾರ ಸತ್ತರೂ ‘ಈಗೀನವರೆಗೂ’ ಅಲ್ಲಿಯೇ ಕುಳಿತ ಆತ್ಮೀಯ…!!!

ಧಾರವಾಡ: ಕಳೆದ ರಾತ್ರಿಯ ಸಮಯದಲ್ಲಿ ಬೈಕಿನಲ್ಲಿ ಇಬ್ಬರು ಹೋಗುತ್ತಿದ್ದಾಗಲೇ ಅಪಘಾತ ನಡೆದಿದ್ದು, ಘಟನೆಯಲ್ಲಿ ಹಿಂಬದಿ ಸವಾರ ಬಚಾವ್ ಆಗಿದ್ದಾನಾದರೂ, ಸಾವಿಗೀಡಾದ ಸವಾರನ ಶವದ ಕೂಗಳತೆ ದೂರದಲ್ಲಿ ಈಗೀನವರೆಗೂ ಸುಮ್ಮನೆ ಕೂತ ಘಟನೆ ಯರಿಕೊಪ್ಪ ಕ್ರಾಸ್ ಬಳಿಯಲ್ಲಿ ಬೆಳಕಿಗೆ ಬಂದಿದೆ.
ಕೆಲ ಸಮಯದ ಹಿಂದೆ ಹೈವೇ ಪೆಟ್ರೋಲಿಂಗ್ ತಂಡವೂ ಹೋಗುತ್ತಿದ್ದ ಸಮಯದಲ್ಲಿ ಓರ್ವ ಕೂತಿದ್ದನ್ನ ನೋಡಿ, ವಿಚಾರಿಸಿದಾಗ ಕೆಳಗಡೆ ಬೈಕ್ ಸಮೇತ ಸವಾರನ ಶವ ತೋರಿಸಿದ್ದಾನೆ.
ಮಾಹಿತಿಯ ಪ್ರಕಾರ ಸಾವಿಗೀಡಾದವನು ಕಣವಿ ಹೊನ್ನಾಪುರದವನೆಂದು ತಿಳಿದು ಬಂದಿದ್ದು, ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.