ಮಹಾರಾಣಾ ಪ್ರತಾಪ ಸಿಂಹ ವೃತ್ತಕ್ಕೆ ಬೇಂದ್ರೆ ಬಸ್ ಡಿಕ್ಕಿ…!

ಧಾರವಾಡ: ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬಂದ ಬೇಂದ್ರೆ ಬಸ್ ನಿಯಂತ್ರಣ ತಪ್ಪಿ ಹಳೇ ಬಸ್ ನಿಲ್ದಾಣದ ಬಳಿಯಿರುವ ರಾಷ್ಟ್ರವೀರ ಪರಮದೇಶಭಕ್ತ ಮಹಾರಾಣಾ ಪ್ರತಾಪ ಸಿಂಹಜೀ ಅವರ ವೃತ್ತಕ್ಕೆ ಡಿಕ್ಕಿ ಹೊಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಹುಬ್ಬಳ್ಳಿಯಿಂದ ಬಂದ ಬಸ್ ಪ್ರಯಾಣಿಕರನ್ನ ಇಳಿಸಿ, ಮತ್ತೆ ಪ್ರಯಾಣಿಕರನ್ನ ಹತ್ತಿಸಿಕೊಳ್ಳಲು ಮುಂದೆ ಹೋದಾಗ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಬಸ್ ಗಾಜು ಒಡೆದು ಪುಡಿಪುಡಿಯಾಗಿದ್ದು, ಚಾಲಕನಿಗೆ ಅಲ್ಪಪ್ರಮಾಣದ ಗಾಯಗಳಾಗಿವೆ.
ಘಟನೆ ನಡೆಯುತ್ತಿದ್ದ ಹಾಗೇ ಸ್ಥಳದಲ್ಲಿ ನೂರಾರೂ ಜನರು ಸೇರಿದ್ದರು. ಜನನಿಬೀಡ ಪ್ರದೇಶದಲ್ಲಿಯೇ ಘಟನೆ ನಡೆದಿದ್ದರಿಂದ, ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು.
ಅವಳಿನಗರದ ಮಧ್ಯದಲ್ಲಿ ಸಂಚರಿಸುತ್ತಿರುವ ಬೇಂದ್ರೆ ಬಸ್ ಚಾಲಕರ ಬಗ್ಗೆ ಈಗಾಗಲೇ ನೂರೆಂಟು ದೂರುಗಳಿದ್ದರೂ, ಯಾರೂ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಇಂತಹ ಅವಘಡಗಳು ಸಂಭವಿಸುತ್ತಿವೆ.
ಪ್ರಕರಣದ ಬಗ್ಗೆ ಸ್ಥಳಕ್ಕೆ ಆಗಮಿಸಿರುವ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.