Posts Slider

Karnataka Voice

Latest Kannada News

ಅಮ್ಮಿನಬಾವಿ ಬಳಿ ಭೀಕರ ಅಪಘಾತ: ರಸ್ತೆಯಲ್ಲೇ ಬಿದ್ದು ಹೊರಳಾಡುತ್ತಿದ್ದಾರೆ ಗಾಯಾಳುಗಳು…!

Spread the love

ಧಾರವಾಡ: ಮಾರುತಿ ಓಮಿನಿ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಗಾಯಾಳುಗಳು ರಸ್ತೆಯಲ್ಲಿಯೇ ಬಿದ್ದು ಹೊರಳಾಡುತ್ತಿರುವ ಘಟನೆ ಈಗಷ್ಟೇ ನಡೆದಿದೆ.

ಧಾರವಾಡದಿಂದ ಸವದತ್ತಿಯತ್ತ ಹೊರಟಿದ್ದ ಕಾರು ಮಾರುತಿ ಓಮಿನಿಗೆ ಡಿಕ್ಕಿ ಹೊಡೆದ ಪರಿಣಾಮ, ಚಾಲಕರಿಬ್ಬರೂ ಅತೀವ ರಕ್ತಸ್ರಾವದಿಂದ ನರಳಾಡುತ್ತಿದ್ದಾರೆ. ದಾರಿಹೋಕರು ವಾಹನದಲ್ಲಿ ಸಿಕ್ಕವರನ್ನ ಹೊರಗೆ ತೆಗೆದಿದ್ದಾರೆ.

ಮುಖಾಮುಖಿ ಡಿಕ್ಕಿಯಲ್ಲಿ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಸುಮಾರು ಹೊತ್ತಿನ ನಂತರ ಸಾರ್ವಜನಿಕರಿಂದ ಅಂಬ್ಯುಲೆನ್ಸ್ ಕರೆಸಿ ಕಳಿಸಿಕೊಡಲಾಗಿದೆ.

ಘಟನೆಯ ಬಗ್ಗೆ ಗ್ರಾಮೀಣ ಠಾಣೆಯ ಪೊಲೀಸರು ಮಾಹಿತಿಯನ್ನ ಪಡೆದಿದ್ದು, ಅಪಘಾತದಲ್ಲಿ ಗಾಯಗೊಂಡವರ ಬಗ್ಗೆ ವಿವರವನ್ನ ಪಡೆಯುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *